Thursday 23 August 2018

॥ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಸಣ್ಣ ಕಥೆ ॥

ಓರ್ವ ಸಿರಿವಂತ ಅವನಿಗೆ ನಾಲ್ಕು ಜನ ಮಕ್ಕಳು. ನಾಲ್ಕು ಜನ ಸೊಸೆಯಂದಿರು ಸಿರಿ - ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ .
ಒಂದು ದಿನ ರಾತ್ರಿ ಸಿರಿವಂತನು ಮಲಗಿರುವಾಗ ವಿಚಿತ್ರ ಕನಸು ಕಂಡ 
ಮನೆಯ ಭಾಗ್ಯಲಕ್ಷ್ಮಿ ಹೊರಗೆ ಹೋಗುತ್ತಿದ್ದಳು ಅವರೀರ್ವರ ಮಧ್ಯದಲ್ಲಿ ಸಂಭಾಷಣೆ ನಡೆಯಿತು .

ಲಕ್ಷ್ಮಿ - ಸಿರಿವಂತನೆ ನಾನು ಈಗ ಹೊರಗೆ ಹೋಗುತ್ತಿದ್ದೇನೆ ನಿನಗೆ ಏನು ವರ ಬೇಕು ಬೇಡು ಕೊಡುತ್ತೇನೆ 

ಸಿರಿವಂತ - ಈಗ ಈ ಮನೆಯ ಹೊಣೆಯನ್ನು ನನ್ನ ಮಕ್ಕಳು ಮತ್ತು ಸೊಸೆಯಂದಿರು ವಹಿಸಿಕೊಂಡಿದ್ದಾರೆ ಅವರಿಗೆ ಕೇಳಿ ಹೇಳುತ್ತೇನೆ .

ಲಕ್ಷ್ಮಿ -  ಆಗಲಿ ಅವರಿಗೆ ಕೇಳಿ ನನಗೆ ತಿಳಿಸು .

ಮರುದಿನ ಮುಂಜಾನೆ ಸಿರಿವಂತನು ತನ್ನ ಮಕ್ಕಳಿಗೆ ಕರೆದು ನಡೆದ ಸಂಗತಿಯನ್ನು ಹೇಳಿದ ಅದನ್ನು ಕೇಳಿ

 ಹಿರಿಯ ಮಗ  ಹೇಳಿದ - ನೂರು ಜನ್ಮ ಕುಳಿತು ಉಂಡರು ಸವೆಯಲಾಗದಷ್ಟು ಸಿರಿ ಸಂಪತ್ತು ಕೇಳು .

ಎರಡನೆಯ ಮಗ ಹೇಳಿದ - ಸಂಪತ್ತು ಸ್ಥಿರವಲ್ಲ ಯಾರಾದರೂ ಕಳವು ಮಾಡಬಹುದು ಅಲ್ಲವೇ  ಕಸಿದುಕೊಳ್ಳಬಹುದು ಭೂಮಿಯನ್ನು ಮಾತ್ರ ಯಾರೂ ಕಳವು ಮಾಡಲಾರರು ಕಸಿದುಕೊಳ್ಳಲಾರರು ಸಾವಿರಾರು ಎಕರೆ ಭೂಮಿಯನ್ನೇ ಕೇಳಿ ಬಿಡಿ 

ಮೂರನೇ ಮಗ ಹೇಳಿದ - ಈ ಸಿರಿ ಸಂಪದ ಭೂಮಿ ಸೀಮೆ ಏನು ಮಾಡುವುದು ನಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ
 ಸಿರಿ ಸಂಪದ ಭೂಮಿ ಸೀಮೆ ಯಾವುದೂ ಸ್ಥಿರವಲ್ಲ ಆದುದರಿಂದ ಎಂದೆಂದಿಗೂ ನಮ್ಮ ಕೈ ಬಿಡಲಾರದಂಥ ಅಧಿಕಾರವನ್ನೇ ಕೇಳಿ ಬಿಡಿ  

ಈಗ ನಾಲ್ಕನೆಯವನ ಸರದಿ ಅವನು ಹೇಳಿದ - ನನಗಿಂತಲೂ ನನ್ನ ಹೆಂಡತಿ ತುಂಬಾ ಜಾಣೆ ಅವಳು ತುಂಬಾ ದೈವಭಕ್ತಳು  ಇಂಥ ವಿಚಾರದಲ್ಲಿ ಅವಳನ್ನು ಕರೆದು ಕೇಳುತ್ತೇನೆ 
ಚಿಕ್ಕ ಮಗನ ಹೆಂಡತಿ ಬಂದು ಹೇಳಿದಳು 
ನಾನು ಕಿರಿಯಳು ನಾನೇನು ಬಲ್ಲೆ ? ಆದರೂ ತಾವು ನನ್ನನ್ನು ಕರೆದು  ಕೇಳಿರುವಿರೆಂದು ಹೇಳುತ್ತೇನೆ ಕೇಳಿ .

ನಮಗೀಗ ಈ ಮನೆಯಲ್ಲಿ ಸಿರಿ ಸಂಪದ ಯಾವುದಕ್ಕೂ ಕೊರತೆಯಿಲ್ಲ ಲಕ್ಷ್ಮಿಯೂ ಹೋದ  ಮೇಲೆ ಅವಳು ಕೊಡುವ ಸಿರಿ ಸಂಪದವಾದರೂ ನಮ್ಮಲ್ಲಿ ಇರಲು ಹೇಗೆ ಸಾಧ್ಯ  ? 

ನಾವೆಲ್ಲರೂ ಈ ಮನೆಯಲ್ಲಿ ಪ್ರೀತಿಯಿಂದ
 ಬಾಳಿ ಬದುಕುತ್ತಿದ್ದೇವೆ ಮುಂದಾದರೂ ಈ ಪ್ರೀತಿ ಹೀಗೆ ವರ್ತಿಸುತ್ತೀರಲಿ 
 ಎಂದು ಲಕ್ಷ್ಮಿಗೆ ಕೇಳಿರಿ  ಕಿರಿಯ ಸೊಸೆ ಮಾತು ಎಲ್ಲರಿಗೂ ಹಿಡಿಸಿತ್ತು 

ಅದೇ ರೀತಿ ಆ ಮನೆಯ ಯಜಮಾನ
 ಲಕ್ಷ್ಮಿಗೆ ಕೇಳಿದ - ತಾಯಿ ನಮಗೆ ಯಾವ 
ಸಿರಿ ಸಂಪದವು ಬೇಡ ನಾವೆಲ್ಲರೂ ಹಿಂದಿನಂತೆ ಮುಂದೆಯೂ ಪ್ರೀತಿಯಿಂದಿರುವಂತೆ ಕರುಣಿಸು 

ಈ ಮಾತನ್ನು ಕೇಳುತ್ತಲೇ ಹೊರಗೆ ಹೋಗುತ್ತಿದ್ದ ಲಕ್ಷ್ಮೀಯು ಮತ್ತೆ ಮನೆಯ ಒಳಗೆ ಬಂದು ಕುಳಿತಳು .

ಸಿರಿವಂತ - ಮನೆಯಿಂದ ಹೋಗಲಣಿಯಾದವಳು ಮತ್ತೆ ಒಳಗೆ ಬಂದಿದ್ದನ್ನು ಕಂಡು ನನಗೆ ಸಂತೋಷವಾಗಿದೆ ತಾಯಿ ನಿನಗೆ ಅನಂತ ಧನ್ಯವಾದಗಳು 

ಲಕ್ಷ್ಮಿ -  ನಾನು ಒಳಗೆ ಬಂದಿರುವುದೇಕೆ ತಿಳಿಯಿತೇ ?

ಸಿರಿವಂತ - ಇಲ್ಲಾ ತಾಯಿ ನನಗೇನೂ ತಿಳಿಯಲಿಲ್ಲ 

ಲಕ್ಷ್ಮೀ-  ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲೇ ನಾನಿರುವುದು ಆದುದರಿಂದ ನಾನು ತಿರುಗಿ ಬಂದೆ.

 ಈ ಮಾತನ್ನು ಕೇಳಿದ ಕೂಡಲೇ ಪ್ರೀತಿಯೇ ನಿಜವಾದ ಸಿರಿ ಸಂಪದವೆಂದು ಸಿರಿವಂತನ ಕುಟುಂಬದವರಿಗೆಲ್ಲ ಮನದಟ್ಟಾಗಿತ್ತು .

ಎದೆಯಲ್ಲಿ ಪ್ರೀತಿ ಮುಖದಲ್ಲಿ ನಗೆ ಇಲ್ಲದಿದ್ದರೆ  ಮನೆಯಲ್ಲಿ ಎಷ್ಟು ಸಿರಿ ಸಂಪದ ವಿದ್ದರೆ 
ಅದಕ್ಕೇನು ಬೆಲೆ ! 

ಎಲ್ಲರೂ ತಮ್ಮ  ಕುಟುಂಬದವರೊಂದಿಗೆ ಪ್ರೀತಿಯಿಂದ  ನಗುನಗುತ್ತಾ  ವರಮಹಾಲಕ್ಷ್ಮಿಯ ಹಬ್ಬವನ್ನು  ಆಚರಿಸಿರಿ 🙏🙏🙏

ಧನ್ಯವಾದಗಳು 

 🙏🙏🙏

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...