Friday 19 March 2021

*ಜ್ಞಾನ- ಭಕ್ತಿ*

ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ನಮಗೇಕೆ ಅವನು ಕಾಣಲಾರ? ಇವೆಲ್ಲ ದೇವರಷ್ಟೇ ಅನಾದಿ ಕಾಲದಿಂದಲೂ ಜನರು ಕೇಳುತ್ತಾ ಬಂದಿರುವ ಪ್ರಶ್ನೆಗಳು. ನಾಸ್ತಿಕರು ಕೃತ, ತ್ರೇತಾ, ದ್ವಾಪರ ಯುಗಗಳಲ್ಲೂ ಇದ್ದರು. ಕಲಿಯುಗದಲ್ಲೂ ಇದ್ದಾರೆ. ಅಂತಹ ಎಷ್ಟೆಷ್ಟು ಯುಗಗಳೋ? ಎಷ್ಟು ಕಲ್ಪಗಳೋ! ಅಂತೂ ಈ ಪ್ರಶ್ನೆ ಸಾರ್ವಕಾಲಿಕವಾದದ್ದು, ಸಾರ್ವತ್ರಿಕವೂ ಆದದ್ದು. 


ದೇವರು ಎಲ್ಲೆಲ್ಲೂ ಇದ್ದಾನೆ ಎಂಬುದೇ ಇದಕ್ಕೆ ಉತ್ತರ. ಬೆಟ್ಟ, ನದೀ, ಸಮುದ್ರ, ಗಿಡ, ಮರ, ಬಳ್ಳಿ ಹೂವು, ಕಾಯಿ, ಹಣ್ಣು, ಹೀಗೆ ನೈಸರ್ಗಿಕ, ಕೃತಕ ಎಲ್ಲದರಲ್ಲೂ ಅವನಿದ್ದೇ ಇದ್ದಾನೆ. ಅಷ್ಟೇಕೆ? ನನ್ನಲ್ಲಿ, ನಿಮ್ಮಲ್ಲಿ, ಅವರಲ್ಲಿ, ಇವರಲ್ಲಿ ಹಿಂದೂಗಳಲ್ಲಿ ಮುಸಲ್ಮಾನರಲ್ಲಿ ಕ್ರೈಸ್ತರಲ್ಲಿ ಎಲ್ಲರಲ್ಲೂ ಭೇದವಿಲ್ಲದೇ ಸಮಾನವಾಗಿದ್ದಾನೆ. ಇದು ಸುಂದರವಾದ ಶರೀರ, ಇದು ಕುರೂಪದ್ದು ಎಂದೆಣಿಸದೆ ಎಲ್ಲಾ ಸ್ಥಾವರ, ಜಂಗಮ ಜೀವಿಗಳಲ್ಲೂ ಇದ್ದಾನೆ. ನಾಸ್ತಿಕರು ಇದನ್ನು ಒಪ್ಪಲಿ ಬಿಡಲಿ,  ಆಸ್ತಿಕರಾದ ನಾವು ಇದನ್ನು ನಂಬಿದ್ದೇವೆ. 


ಆದರೆ, ಎಲ್ಲೆಲ್ಲೂ ಇರುವ ದೇವರನ್ನು ನಾವು  ಕಾಣುವುದು ಹೇಗೆ? ಅವನು ನಮಗೇಕೆ ಗೋಚರನಾಗಲಾರ? ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ಆದರೆ ನಾವೇ ಪ್ರಯತ್ನಿಸಿದರೆ ಸ್ವಲ್ಪವಾದರೂ ಸಾಧ್ಯವೇನೋ. 


ಭಗವಂತನ ವೈಭವವನ್ನು, ಸುಂದರ ರೂಪವನ್ನು ನಾವು ಎಲ್ಲೆಲ್ಲಿ ನೋಡಬಹುದು? ಅವನದೇ ಸೃಷ್ಟಿಯ ಎಲ್ಲಾ ಸುಂದರ ವಸ್ತು, ವ್ಯಕ್ತಿಗಳಲ್ಲಿ ಪ್ರಕೃತಿಯಲ್ಲಿ  ಅವನ ತೇಜದ ಅಂಶ ತುಸು ಹೆಚ್ಚಾಗಿದೆಯಂತೆ.   ಇದು ಶ್ರೀಕೃಷ್ಣನದೇ ಮಾತು.  


ಈಗ ಭಗವದ್ಗೀತೆಯ 10ನೆಯ ಅಧ್ಯಾಯಕ್ಕೆ ಹೋಗೋಣ. ಅದನ್ನು ವಿಭೂತಿ ಯೋಗವೆನ್ನುತ್ತಾರೆ. ಹಿಂದಿನ ಅಧ್ಯಾಯಗಳಲ್ಲಿ ಶ್ರೀಕೃಷ್ಣ, 

"ಹೇ ಅರ್ಜುನ! ಈ ಪ್ರಕೃತಿಯು  ನನ್ನ ಪತ್ನಿಯಂತೆ. ಅವಳಲ್ಲಿ ನಾನು ಗರ್ಭವಿಟ್ಟು ಸಕಲ ಜೀವರಾಶಿಗಳನ್ನೂ ಜಡವಸ್ತುಗಳನ್ನೂ ಸೃಷ್ಟಿಸಿದ್ದೇನೆ. ಆದರೆ ಕೆಲವಲ್ಲಿ ಮಾತ್ರ ನನ್ನ ತೇಜಸ್ಸು ಪ್ರಖರವಾಗಿ ಎದ್ದು ಕಾಣುತ್ತದೆ. ಅದೂ ನನ್ನದೇ ಸಂಕಲ್ಪ.  ಅಂದರೆ ನಾನೇ ಒಂದೊಂದು ಜೀವರಾಶಿಗಳ ಒಂದೊಂದು ಪ್ರಭೇದಗಳಲ್ಲಿ ಸುಂದರವಾಗಿ ಕಾಣಿಸಿಕೊಳ್ಳುತ್ತೇನೆ. ಎನ್ನುತ್ತಾನೆ ಕೃಷ್ಣ. ಹನ್ನೊಂದು ರುದ್ರರಲ್ಲಿ ಶಂಕರನೂ, ಪುರೋಹಿತರಲ್ಲಿ ಬೃಹಸ್ಪತಿಯೂ, ಸೇನಾನಿಗಳಲ್ಲಿ ಷಣ್ಮುಗನೂ, ಮಹರ್ಷಿಗಳಲ್ಲಿ ಭೃಗುವೂ...ಮುಂತಾಗಿ."


"ಜಲಾಶಯಗಳಲ್ಲಿ ಸಾಗರವೂ, ವೃಕ್ಷಗಳಲ್ಲಿ ಅಶ್ವತ್ಥವೂ, ಮನುಷ್ಯರಲ್ಲಿ ರಾಜರ ರೂಪದಲ್ಲೂ ನಾನಿದ್ದೇನೆ. ನದಿಗಳಲ್ಲಿ ಗಂಗೆಯಾಗಿಯೂ, ಗಿರಿಶಿಖರಗಳಲ್ಲಿ ಹಿಮಾಲಯವಾಗಿಯೂ ಇದ್ದೇನೆ." ಎನ್ನುತ್ತಾನೆ. " "ಪಾಂಡವರಲ್ಲಿ ಧನಂಜಯನಾದ ನಿನ್ನಲ್ಲೇ ನನ್ನ  ತೇಜಸ್ಸನ್ನು ನಾನು ಅಂಶವಾಗಿ ಇಟ್ಟಿದ್ದೇನೆ. " ಎಂದೂ ಹೇಳುತ್ತಾನೆ. 


 " ಸ್ತ್ರೀಯರಲ್ಲಿ ನೆನಪಿನ ಶಕ್ತಿಯಾಗಿಯೂ, ಬುದ್ಧಿಶಕ್ತಿ, ಧರಿಸುವ, ಭರಿಸುವ ಶಕ್ತಿಯಾಗಿಯೂ, ಕ್ಷಮಾಗುಣವಾಗಿಯೂ ನಾನಿದ್ದೇನೆ." ಎಂದಿದ್ದಾನೆ ಕೃಷ್ಣ.  ಹೀಗೆ, ವ್ಯಕ್ತ, ಅವ್ಯಕ್ತ, ಮೂರ್ತ, ಅಮೂರ್ತ ಎಲ್ಲ ರೂಪದಲ್ಲೂ ಇದ್ದೇನೆ ಎಂದು ಅವನೇ ಹೇಳಿದ ಮೇಲೆ, ನಾವು ಅವನನ್ನು ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಮಾತ್ರ ನಮಗೆ ಅವನ  ಇರುವಿಕೆಯ ಅನುಭವವಾಗುತ್ತದೆ. 

ಆದರೆ ಈ ರೂಪಗಳಲ್ಲಿ ಭಗವಂತನ ಧ್ಯಾನ, ಉಪಾಸನೆಯನ್ನು ಮಾಡಲು ನಾವು ಸಾಮಾನ್ಯರು ಬಹಳ ಸಾಧನೆ ಮಾಡಬೇಕು. 

ಅದಕ್ಕೆಂದೇ ಏನೋ ನಮ್ಮ ಪೂರ್ವೀಕರು ದೇವಾಲಯಗಳನ್ನು ನಿರ್ಮಿಸಿದರು. ಅಲ್ಲಿನ ಅರ್ಚಾಮೂರ್ತಿಗಳಲ್ಲಿ ವೇದ ಮಂತ್ರಗಳ ಮೂಲಕ, ಆಗಮಗಳಲ್ಲಿ ಹೇಳಲ್ಪಟ್ಟಿರುವ ವಿಧಿಗಳ ಮೂಲಕ  ಭಗವಂತನನ್ನು ಆವಾಹಿಸಿ ಕಳಾಕರ್ಷಣ ಮಾಡಿ ಶಕ್ತಿ ತುಂಬಿದರು. ಈ ವಿಧಿ, ಮಂತ್ರಗಳನ್ನೆಲ್ಲಾ ರಚಿಸಿದನೂ ಅವನೇ! ದೇವಾಲಯಗಳು ಕಟ್ಟಲ್ಪಟ್ಟಿರುವುದೂ ಅವನ ಸಂಕಲ್ಪದಿಂದಲೇ, ಸಂಕಲ್ಪದಂತೆಯೇ!


 ಅರ್ಚಾ ಮೂರ್ತಿಗಳಲ್ಲೂ ಎಲ್ಲೋ ಕೆಲವು ಮಾತ್ರ ಸ್ವಯಂವ್ಯಕ್ತ. ಇನ್ನಿತರ ಮೂರ್ತಿಗಳು, ದಾರು( ಮರದ), ಕಲ್ಲಿನಲ್ಲಿ ಕಟೆದ ಅಥವಾ ಸುಧಾ ಅಂದರೆ ಮರಳು, ಸುಣ್ಣದ ಮಿಶ್ರಣದಿಂದಾದವು. ( ಹೀಗೆ ಯೋಚಿಸುವುದೂ ಹೇಳುವುದೂ ಅಪರಾಧ. ದೇವರು ನನ್ನನ್ನು ಕ್ಷಮಿಸಲಿ! ) ಕೆಲವು ಚಿತ್ರಪಟಗಳಲ್ಲೂ ದೇವರ ಪೂಜೆ ಮಾಡುತ್ತೇವೆ. ಆದರೆ ಇವೆಲ್ಲದರಲ್ಲೂ ಭಗವಂತ ಸುಂದರವಾಗಿಯೇ ಮೂಡಿಬರಲು ಅವನ ಸಂಕಲ್ಪವಲ್ಲವೇ ಕಾರಣ? ಆ ಶಿಲ್ಪಿ, ಸ್ಥಪತಿ, ಚಿತ್ರಕಾರರ ಮನಸ್ಸಿನಲ್ಲಿ, ಕೈಯಲ್ಲಿ ತಾನೇ ಕುಳಿತು ತನ್ನನ್ನು ಅಭಿವ್ಯಕ್ತಿಪಡಿಸದಿದ್ದರೆ ಆ ಮೂರ್ತಿ ಸುಂದರವಾಗಿ ಕಾಣಲು ಸಾಧ್ಯವೇ?   ಈ  ಭಾವ ನಮ್ಮಲ್ಲಿ ಬಂದರೆ ಸಾಕು. ಭಕ್ತಿ ತಂತಾನೇ ಹೆಚ್ಚುತ್ತದೆ. ಇಂಥಾ ಭಕ್ತಿಭಾವದಿಂದ ದೇವಸ್ಥಾನಕ್ಕೆ ಹೋದಾಗ ಅವನ ದರ್ಶನ ಮಾಡಿದಾಗ  ಆಗುವ ಅನುಭವವೇ ವಿಶಿಷ್ಟ. 


ಈ ಅನುಭವವನ್ನು ಇನ್ನೂ ಪಕ್ವವಾಗಿಸಲು ನಾವು ನಮ್ಮ ಜ್ಞಾನವನ್ನೂ ವಿಸ್ತರಿಸಿಕೊಳ್ಳಬೇಕು. 


ಈ ಹಂತದಲ್ಲಿ ನಮಗೆ ಆಚಾರ್ಯರ, ಗುರುಗಳ, ವಿದ್ವಾಂಸರ ಪ್ರವಚನಗಳು ರುಚಿಸಲಾರಂಭಿಸುವುದು. ಅದೇ ನಮ್ಮ ಕರ್ಮಪಕ್ವ ಕಾಲ ಎನ್ನೋಣ. ಪ್ರವಚನಗಳಲ್ಲಿ ಆಗಾಗ ಉದಾಹರಿಸಲ್ಪಡುವ ಸ್ತೋತ್ರಗಳೂ, ತಮಿಳುನಾಡಿನ ಆಳ್ವಾರರ ಪದ್ಯಗಳೂ, ಹರಿದಾಸರ ಪದಗಳೂ, ಸಂತರ ಭಜನೆಗಳೂ, ವಾಗ್ಗೇಯಕಾರರ ಕೀರ್ತನೆಗಳೂ ಆಗ ನಮಗೆ ಅರ್ಥವಾಗಲಾರಂಭಿಸುತ್ತವೆ. ಇವೆಲ್ಲವೂ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತವೆ. ಏಕೆಂದರೆ, ಈ ಭಕ್ತರು ತಾವು ಆನುಭವಿಸಿದ್ದನ್ನೇ ನಮಗೆ ಉಣಬಡಿಸಿದ್ದಾರೆ. "ಪೋಗದಿರೆಲೋ ರಂಗಾ! ಬಾಗಿಲಿಂದಾಚೆ! " ಎಂದ ದಾಸರಿಗೆ ಕೃಷ್ಣ ಹೊಸಿಲು ದಾಟುತ್ತಿರುವುದು ಕಣ್ಣಿಗೆ  ಕಂಡಿರಬೇಕು. 

'ರಾ ರಾಮ! ಮಾ ಇಂಟಿದಾಕ! " ಎಂದ ತ್ಯಾಗರಾಜರಿಗೆ ರಾಮಚಂದ್ರ ತನ್ನ ಮನೆಯ ಬೀದಿಗೆ ಬಂದದ್ದು ಕಂಡಿರಬೇಕು. " ಎಚ್ಚರಿಕದಾ ರಾರ ಶ್ರೀ ರಾಮಚಂದ್ರ ! ಎಂದ ತ್ಯಾಗರಾಜರಿಗೆ, ತನ್ನ ಮನೆಯ ತಗ್ಗು ಛಾವಣಿ ಶ್ರೀ ರಾಮಚಂದ್ರನ ತಲೆಗೆ ತಗುಲುವಂತೆ ಭಾಸವಾಯಿತಂತೆ!  ಹೀಗೇ ಬಹಳಷ್ಟು ಅನುಭವಗಳು ಈ ಅಪೂರ್ವ  ಭಕ್ತರಿಗೆ ಉಂಟಾದವು. 

 ಇನ್ನು ಆಳ್ವಾರುಗಳೋ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಂತರ್ಯಾಮಿಯಾಗಿ ತನ್ನಲ್ಲಿ ಬಂದು ನಿಂತ ಪರಮಾತ್ಮನ ಸಾಂನ್ನಿಧ್ಯವನ್ನೇ ಹಿತವಾಗಿ ಅನುಭವಿಸುತ್ತಾರೆ. ಎಂಥಾ ಯೋಗಿಗಳು? 


ವಿಷ್ಣುಚಿತ್ತರು ಪೆರಿಯಾಳ್ವಾರರೆಂದೂ ವಿಖ್ಯಾತರಾದವರು. ಆಂಡಾಳ್ಗೆ 

( ಗೋದಾದೇವಿಗೆ) ತಂದೆಯಾದವರು. 


ಅವರು, " ನಿನ್ನನ್ನು ತಂದು ನನ್ನ ಹೃದಯಕಮಲದಲ್ಲಿಟ್ಟೆ! ನನ್ನನ್ನೂ ನಿನ್ನೊಳಗೆ ಇಟ್ಟೆ. ನನ್ನ ಅಪ್ಪಾ, ನನ್ನ ಇಂದ್ರಿಯಗಳನ್ನೆಲ್ಲಾ ನಿನ್ನ  ವಶದಲ್ಲಿಟ್ಟಿರುವ ಹೃಷೀಕೇಶನೇ! ನನ್ನ ಉಸಿರನ್ನು ಕಾಪಾಡುವವನೂ ನೀನಲ್ಲವೇ?" ಎನ್ನುತ್ತಾರೆ. ಎಂಥಾ ಅನುಭವ ! ಅಂತರ್ಯಾಮಿಯಾಗಿ ಭಗವಂತನನ್ನು ಅನುಭವಿಸುವುದು ಸುಲಭದ ವಿಷಯವೇ? 


ಮೊದಲ ಮೂರು ಆಳ್ವಾರುಗಳೋ? ಭಗವಂತನ ಸೃಷ್ಟಿಯಿಂದಲೇ ಅವನಿಗೆ ಆರತಿ ಎತ್ತಿದವರು ಪೊಯ್ಗೈ ಆಳ್ವಾರರು. ಇಡೀ ಭೂಮಂಡಲವನ್ನೇ ಹಣತೆಯನ್ನಾಗಿಸಿ, ಸಮುದ್ರವನ್ನಾಗಿ ಭಾವಿಸಿ, ದೀಪ ಹಚ್ಚಿ ಸೂರ್ಯನೆಂಬ ಜ್ಯೋತಿಯಿಂದ ಭಗವಂತನಿಗೆ ಆರತಿ ಬೆಳಗಿದರು. 


ಪೇಯಾಳ್ವಾರರು ಭಗವಂತನಲ್ಲಿ ತನಗಿರುವ ಪ್ರೇಮವನ್ನೇ ಹಣತೆಯಾಗಿಸಿ, ಅವನನ್ನು ಕಾಣುವ ಹಂಬಲವನ್ನೇ ತುಪ್ಪವಾಗಿಸಿ, ಸಂಸಾರದ  ಸುಖ, ದುಃಖಗಳನ್ನೇ ಬತ್ತಿಯನ್ನಾಗಿಸಿ ದೀಪ ಬೆಳಗಿದರು.  ಅದರಿಂದಲೇ ಆರತಿ ಎತ್ತಿ ಭಗವಂತನಿಗೆ ಕೈ ಮುಗಿದರು. 


ನಮ್ಮಾಳ್ವಾರರಂತೂ, ಉಣ್ಣುವ ಅನ್ನ, ಕುಡಿಯುವ ನೀರು, ಮೆಲ್ಲುವ ವೀಳ್ಯದೆಲೆ ಎಲ್ಲದರಲ್ಲೂ ಕೃಷ್ಣನನ್ನೇ ಕಂಡು " ಎಲ್ಲಾಂ ಕಣ್ಣನ್."  ಎಂದರು. 

ಮಿಕ್ಕ ಎಲ್ಲಾ ಆಳ್ವಾರರೂ ಹೀಗೇ ಅವರವರ ರೀತಿಯಲ್ಲಿ ಅನುಭವಿಸಿದ್ದಾರೆ. ( ಕ್ಷಮಿಸಿ. ಹೇಳುತ್ತ ಹೋದರೆ ಬಹಳ ಉದ್ದವಾಗುತ್ತದೆ.)


ಪಂಢರಪುರದ ವಿಠಲನ ಮಹಿಮೆಯೇನು ಕಡಿಮೆಯೇ? ಪುಂಡಲೀಕ ಭಕ್ತನ ವಶನಾಗಿ ಅವನೆಸೆದ ಇಟ್ಟಿಗೆಯ ಮೇಲೆ ನಿಂತವನಲ್ಲವೇ ಆವನು? 


ಪ್ರವಚನಗಳಲ್ಲಿ

ಇಂಥಾ ಅಪರೂಪದ ಅನುಭವಗಳನ್ನು  ಕೇಳಿ ಕೇಳಿ ಮನಸ್ಸು ಭಗವಂತನ ಗುಣಗಳನ್ನು ಅರಿಯಲಾರಂಭಿಸುತ್ತದೆ. ಅವನ ಕಥೆ ಕಿವಿಗೆ ರುಚಿಸಲಾರಂಭಿಸುತ್ತದೆ.  ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಹೃದಯಕ್ಕೆ ತಂಪಾಗುತ್ತದೆ.  ಭಗವಂತನ ಲೀಲೆಗಳನ್ನು ವಿಸ್ತಾರವಾಗಿ ಕೇಳಿದಾಗ ಅವನಲ್ಲಿ ಪ್ರೀತಿ  ಹೆಚ್ಚಾಗಿ ಉಕ್ಕಲಾರಂಭಿಸುತ್ತದೆ. ವಾಮನ, ತ್ರಿವಿಕ್ರಮ, ನಾರಸಿಂಹ, ರಾಮ, ಕೃಷ್ಣ   ಈ ಅವತಾರಗಳ ವೈಭವವನ್ನು ಕೇಳಿ  ಆನಂದಿಸುವಾಗ, ನಾವು ಆ ಕಾಲದಲ್ಲಿರಬಾರದಿತ್ತೇ,  ಸುಂದರವಾದ ಶ್ರೀರಾಮನ ರೂಪವನ್ನು ನೋಡಿದ್ದರೆ? ಕೃಷ್ಣನನ್ನು ಒಮ್ಮೆಯಾದರೂ ಮುದ್ದಿಸಿದ್ದರೆ? .... ಎಂದೆಲ್ಲಾ ಭಾವನೆಗಳು ಬಾರದೇ ಇರಲಾರವು. ಅದೇ ಭಾವನೆಗಳನ್ನು ಮನದಲ್ಲಿ ತುಂಬಿಕೊಂಡು ಶ್ರೀರಾಮನ, ಶ್ರೀಕೃಷ್ಣನ ದೇವಾಲಯಕ್ಕೆ ಹೋದರೆ, ಭಗವಂತನ ದರ್ಶನದಿಂದ ಆಗುವ ಅನುಭವದ ಪರಾಕಾಷ್ಠೆಯನ್ನು ಬಾಯಿಂದ ವರ್ಣಿಸಲಾಗದು. ಇದೇ ಸತ್ಸಂಗದ, ಭಾಗವತ ಸಂಗದಿಂದ ಸಿಗುವ ಲಾಭ. ಇದನ್ನೇ ಅಲ್ಲವೇ ಕೃಷ್ಣ ಗೀತೆಯಲ್ಲೂ ಹೇಳಿರುವುದು? "

*"ಮಚ್ಚಿತ್ತಾ: ಮದ್ಗತ ಪ್ರಾಣಾ: ಬೋಧಯಂತಃ ಪರಸ್ಪರಂ.*

*ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ."* (10.9)


*ನನ್ನಲ್ಲೇ ಮನಸ್ಸನ್ನೂ ಪ್ರಾಣವನ್ನೂ ನೆಟ್ಟಿರುವ ಭಕ್ತರು ದಿನವೂ ನನ್ನ ಕಥೆಗಳನ್ನೇ, ಲೀಲೆಗಳನ್ನೇ ಮತ್ತೆ ಮತ್ತೆ ಕೇಳಿ ಆನಂದಿಸಿ ಪರಸ್ಪರರಿಗೆ ಸಂತೋಷವುಂಟು ಮಾಡುತ್ತಾರೆ.*

ಇದು ಜ್ಞಾನೀ ಭಕ್ತರ ಲಕ್ಷಣ. ಇಂಥಾ ಭಕ್ತರು ಕೃಷ್ಣನಿಗೆ ಬಹಳ ಪ್ರೀತಿಪಾತ್ರರಂತೆ. 


ಅವನೇ ಗೀತೆಯಲ್ಲಿ ಹೇಳಿರುವಂತೆ, ಜ್ಞಾನೀ ಭಕ್ತನೇ ಅವನಿಗೆ ಬಹಳ ಪ್ರೀತಿಪಾತ್ರನಂತೆ. ಅವನೇ ಕೃಷ್ಣನ ಆತ್ಮವಂತೆ! ಎಲ್ಲರ ಆತ್ಮನಾದ ಪರಮಪುರುಷನಿಗೆ ಜ್ಞಾನೀಭಕ್ತನು ಆತ್ಮನಂತೆ. ಎಂಥಾ ಸೌಲಭ್ಯ? ( 7- 16,17,18. ಜ್ಞಾನೀ ತು ಆತ್ಮೈವ ಮೇ ಮತಂ...)


  ಏನೂ ಅರಿಯದ, ಆದರೆ, ಶ್ರದ್ಧಾ ಭಕ್ತಿಗಳಿರುವ ಭಕ್ತನಿಗೆ ಭಗವಂತ ಒಲಿಯುತ್ತಾನಾದರೂ, ಅವನ ಮಹಿಮೆಯನ್ನು ಅರಿತು ಪೂಜಿಸುವ ಭಕ್ತರು ಅವನಿಗೆ ಹೆಚ್ಚು ಪ್ರಿಯರಾಗುತ್ತಾರೆ. 


ಬಂಧುಗಳೇ, ನಾವೂ ಪ್ರವಚನ, ಪಾರಾಯಣಗಳಿಂದ,ಸ್ತೋತ್ರಗಳಿಂದ ಭಗವಂತನನ್ನು ಅರಿತು ಅವನಿಗೆ ಪ್ರಿಯರಾಗೋಣ! ಅವನೆಡೆಗೆ ಸಾಗೋಣ!


ನಿರ್ಮಲಾ ಶರ್ಮ.

Monday 8 March 2021

ಪದೆ ಪದೇ ನೀರು ಕುಡೀಬೇಕೆನಿಸುತಿದ್ಯಾ?

ದ ವಿಷಯದಲ್ಲಿ ಎಲ್ಲ ಸರಿ ಇದೆ ಎಂದುಕೊಂಡಾಗಲೂ ಏನೋ ಸರಿ ಇಲ್ಲ ಎಂದು ಹೇಳಲು ದೇಹ ಕೆಲವು ಸೂಚನೆ ಭಾಷೆಗಳನ್ನು ಅನುಸರಿಸುತ್ತದೆ. ಕೇಳುವ ವ್ಯವಧಾನ, ಗಮನಿಸುವ ಕಣ್ಣು ನಮ್ಮದಾಗಿರಬೇಕಷ್ಟೇ. 

 

ನೀವು ಆರೋಗ್ಯವಂತರಾಗಿದ್ದೀರಿ ಎಂದುಕೊಳ್ಳುವುದೂ, ನಿಜವಾಗಿಯೂ ಆರೋಗ್ಯದಿಂದಿರುವುದು ಎರಡು ಬೇರೆ ಬೇರೆ ವಿಷಯಗಳು. ಜಿಮ್‌ಗೆ ಹೋಗುತ್ತೀರಿ, ಉತ್ತಮ ಆಹಾರವನ್ನಷ್ಟೇ ಸೇವಿಸುತ್ತೀರಿ, ರಾತ್ರಿ 10 ಗಂಟೆಗೆ ಮುಂಚೆ ನಿದ್ರಿಸುತ್ತೀರಿ - ಎಲ್ಲ ಸರಿಯಷ್ಟೇ. ಆದರೂ ಕೆಲವೊಮ್ಮೆ ಆರೋಗ್ಯ ಕೈಕೊಡುತ್ತದೆ. ದೇಹವು ಅನಾರೋಗ್ಯದ ಕುರಿತು ಸೈಲೆಂಟಾಗಿ ಕೆಲ ಸೂಚನೆಗಳನ್ನು ರವಾನಿಸುತ್ತಿರಬಹುದು. ಅದನ್ನು ನೀವು ಗಮನಿಸಲು ಸೋಲುತ್ತಿರಬಹುದು. 


1. ನಿರಂತರ ತಿನ್ನುವುದೇ ಯೋಚನೆ


ತಿನ್ನುವುದರಲ್ಲಿ ಖುಷಿಯಿದೆ. ಹಾಗಂತ ಇಡೀ ದಿನ ತಲೆಯಲ್ಲಿ ಈಗೇನು ತಿನ್ನೋಣ ಎಂದೇ ಓಡುತ್ತಿದ್ದರೆ, ನೀವು ದೇಹಕ್ಕೆ ಅಗತ್ಯವಾದಷ್ಟನ್ನು ತಿನ್ನುತ್ತಿಲ್ಲ ಎಂದರ್ಥ. ನಮ್ಮಲ್ಲಿ ಆರೋಗ್ಯವಂತರಾಗಿರುವುದಕ್ಕಾಗಿ ಡಯಟ್ ಮಾಡುವವರನ್ನು, ತೂಕ ಇಳಿಸಲು ನೋಡುವವರನ್ನು ಜನ ಶ್ಲಾಘಿಸುವುದೇನೋ ನಿಜ, ಅದಕ್ಕಾಗಿ ತಪ್ಪಾದ ರೀತಿಯ ಡಯಟ್ ಮಾಡಿದರೆ ಈಟಿಂಗ್ ಡಿಸಾರ್ಡರ್‌ಗಳು ಶುರುವಾಗಬಹುದು. ಮಾನಸಿಕ ಕಾಯಿಲೆಗಳಲ್ಲಿ ಈಟಿಂಗ್ ಡಿಸಾರ್ಡರ್‌ನಿಂದ ಸಾಯುವವರ ಸಂಖ್ಯೆಯೇ ಜಾಸ್ತಿ ಎಂಂಬುದು ನಿಮಗೆ ಗೊತ್ತಿರಲಿ.


2. ಅತಿಯಾಗಿ ಕೂದಲುದುರುವಿಕೆ


ಕೂದಲುದುರುವುದು ದೇಹದಲ್ಲಿ ಪ್ರೋಟೀನ್ ಕೊರತೆಯಾಗಿರುವುದನ್ನು ಸೂಚಿಸುತ್ತದೆ. ತಕ್ಷಣ ಸರಿ ಮಾಡಿಕೊಳ್ಳಲಿಲ್ಲವೆಂದರೆ ಅತಿಯಾದ ಸುಸ್ತು, ರೋಗ ನಿರೋಧಕ ವ್ಯವಸ್ಥೆ ಹದಗೆಡುವಿಕೆ ಕಾಣಿಸಿಕೊಳ್ಳುತ್ತದೆ.


3. ಮಧ್ಯವಯಸ್ಸಿನಲ್ಲೇ ಅತಿಯಾದ ಸುಕ್ಕು


ಸುಕ್ಕು ಕೂಡಾ ಪ್ರೋಟೀನ್ ಕೊರತೆಯಿಂದಲೇ ಬೇಗ ಅಮರಿಕೊಳ್ಳುತ್ತದೆ. 2007ರಲ್ಲಿ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್‌ನಲ್ಲಿ ಈ ಸಂಬಂಧ ಪ್ರಕಟವಾದ ಅಧ್ಯಯನ ವರದಿಯು ಪ್ರೋಟೀನ್ ಚೆನ್ನಾಗಿ ತೆಗೆದುಕೊಳ್ಳುವವರಲ್ಲಿ ಸುಕ್ಕು ಕಡಿಮೆ ಇರುವುದನ್ನು ತಿಳಿಸಿದೆ. 


4. ಸ್ಕಿನ್ ಟ್ಯಾಗ್ಸ್


ಚರ್ಮದ ಮೇಲೆ, ವಿಶೇಷವಾಗಿ ಕಣ್ಣಿನ ಸುತ್ತಮುತ್ತ ಸ್ವಲ್ಪ ಹಳದಿ ಬಣ್ಣದ ಚಿಮುಕಲು ರೀತಿಯ ಗುಳ್ಳೆಗಳು ಎದ್ದಿದ್ದರೆ ಅದನ್ನು ನೆಗ್ಲೆಕ್ಟ್ ಮಾಡಬೇಡಿ. ಬಹುಷಃ ಅದು ದೇಹದಲ್ಲಿ ಕೊಲೆಸ್ಟೆರಾಲ್ ಹೆಚ್ಚಾಗಿರುವುದನ್ನು ಸೂಚಿಸುತ್ತಿರಬಹುದು. ತಕ್ಷಣ ವೈದ್ಯರನ್ನು ಕಂಡು ನಿಮ್ಮ ಕೊಲೆಸ್ಟೆರಾಲ್ ಮಟ್ವವನ್ನು ಪರೀಕ್ಷಿಸಿಕೊಳ್ಳಿ. ಹೆಚ್ಚಿದ್ದರೆ, ಕೂಡಲೇ ಅದನ್ನು ತಗ್ಗಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಿ.


5. ಉಗುರಿನಲ್ಲಿ ವ್ಯತ್ಯಾಸ


ಅನಾರೋಗ್ಯವನ್ನು ಉಗುರುಗಳು ಬಹುಬೇಗ ತಿಳಿಸುತ್ತವೆ. ಉಗುರು ಕಂತು, ಕಪ್ಪಾಗುವುದು, ಹಳದಿ ಬಣ್ಣಕ್ಕೆ ತಿರುಗುವುದು, ಬೇಗ ಮುರಿಯುವುದು ಮುಂತಾದ ವ್ಯತ್ಯಾಸಗಳು ಕಂಡುಬಂದಲ್ಲಿ ಅವು ನೀವು ಸೇವಿಸುತ್ತಿರುವ ಆಹಾರ ಸರಿಯಿಲ್ಲವೆಂದೋ, ಸ್ಮೋಕಿಂಗ್‌ನಿಂದ ಶ್ವಾಸಕೋಶಗಳು ಸುಸ್ತಾಗಿವೆ ಎಂದೋ ಅಥವಾ ಇತರೆ ಆಂತರಿಕ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು. 


6. ಯಾವಾಗಲೂ ಬಾಯಾರಿಕೆ


ವರ್ಕೌಟ್ ಬಳಿಕ ನೀರು ಕುಡಿಯಲೇಬೇಕೆನಿಸುವುದು ನಾರ್ಮಲ್. ಆದರೆ ಕುಳಿತಲ್ಲಿ, ನಿಂತಲ್ಲಿ ಬಾಯಾರಿಕೆಯಾಗುತ್ತಿದ್ದರೆ ಅದು ನಿಮ್ಮ ಬ್ಲಡ್ ಶುಗರ್ ಮಟ್ಟದಲ್ಲಿ ವ್ಯತ್ಯಾಸವಾಗಿರುವುದನ್ನು ಸೂಚಿಸುತ್ತಿರಬಹುದು. ಇದು ಡಯಾಬಿಟೀಸ್‌ನ ಆರಂಭಿಕ ಸೂಚನೆಯಾಗಿರಬಹುದು.


7. ವಾಸನೆಯ ಉಸಿರು


ಈರುಳ್ಳಿ ಬೆಳ್ಳುಳ್ಳಿ ಸೇವಿಸಿದಾಗ ಉಸಿರಾಟ ವಾಸನೆ ಬರುವುದು ಸಹಜ. ಆದರೆ, ಅದರ ಹೊರತಾಗಿಯೂ ಯಾವಾಗಲೂ ಉಸಿರು ವಾಸನೆ ಬರುತ್ತಿದ್ದರೆ ಅದು ಬಾಯಿಯ ಅಥವಾ ಹಲ್ಲಿಗೆ ಸಂಬಂಧಿಸಿದ ಕಾಯಿಲೆಯ ಸೂಚನೆಯಾಗಿರಬಹುದು. ಅಷ್ಟೇ ಅಲ್ಲ, ಹೃದಯ ಸಮಸ್ಯೆಗಳ ಕುರಿತ ಎಚ್ಚರಿಕೆಯನ್ನೂ ನೀಡುತ್ತಿರಬಹುದು.


8. ಗಾಯಗಳು ಗುಣವಾಗದಿರುವುದು


ಗಾಯಗಳಾದರೆ ಅವು ಗುಣವಾಗಲು ಸಾಮಾನ್ಯಕ್ಕಿಂತ ಬಹಳ ದಿನಗಳನ್ನು ತೆಗೆದುಕೊಳ್ಳುತ್ತಿವೆ ಎಂದರೆ ಅದು ವಿಟಮಿನ್ ಡಿ ಕೊರತೆಯನ್ನು ಸಾರಿ ಹೇಳುತ್ತಿರುತ್ತದೆ. 


9. ಕಣ್ಣಿನ ಬಣ್ಣ ಬದಲಾವಣೆ


ಸಾಮಾನ್ಯವಾಗಿ ಬಿಳಿಯಾಗಿರುವ ಕಣ್ಣಿನ ಬಣ್ಣ ಸ್ವಲ್ಪ ಹಳದಿಯಾದರೂ ಅದನ್ನು ನೆಗ್ಲೆಕ್ಟ್ ಮಾಡಬೇಡಿ. ಅದು ಲಿವರ್, ಯಕೃತ್ತು ಹಾಗೂ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು.


10. ಅತಿಯಾದ ತಾಪಮಾನ ಸೆನ್ಸಿಟಿವಿಟಿ


ಬಿಸಿ ಅಥವಾ ತಂಪನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ, ದೇಹ ಸಹಕಾರ ನೀಡುತ್ತಿಲ್ಲವೆಂದರೆ ಅದು ಥೈರಾಯ್ಡ್ ಸಮಸ್ಯೆಯ ಸೂಚಕ. ಈ ತಾಪಮಾನ ಸೆನ್ಸಿಟಿವಿಟಿ ಹೊಸದಾಗಿ ಶುರುವಾಗಿದ್ದರೆ ಕೂಡಲೇ ವೈದ್ಯರನ್ನು ಕಂಡು ವಿಚಾರಿಸಿ.


11. ಅತಿಯಾದ ತೂಕ ಕಳೆದುಕೊಳ್ಳುವಿಕೆ


ನೀವು ಪ್ರಯತ್ನಿಸಿ ತೂಕ ಕಳೆದುಕೊಂಡಾಗ ಅದು ಖುಷಿ ಪಡುವ ವಿಷಯ. ಆದರೆ, ಪ್ರಯತ್ನಿಸದಿದ್ದರೂ ನಿರಂತರವಾಗಿ ತೂಕ ಇಳಿಯುತ್ತಲೇ ಇದೆ ಎಂದರೆ ಅದು ಡಯಾಬಿಟೀಸ್, ಹಾರ್ಟ್ ಫೇಲ್ಯೂರ್ ಅಥವಾ ಕ್ಯಾನ್ಸರನ್ನು ಸೂಚಿಸುತ್ತಿರಬಹುದು.


ಕೃಪೆ  ವಾಟ್ಸಪ್

ಟೋಲ್ ಗೇಟ್

 ಟೋಲ್ ಗೇಟ್‌ಗಳಲ್ಲಿ ನೀವು ಸ್ವೀಕರಿಸುವ ರಶೀದಿಗಳೊಂದಿಗೆ ನೀವು ಏನು ಮಾಡುತ್ತೀರಿ?


 ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.


 ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ಸ್ವೀಕರಿಸುವ ರಶೀದಿಗಳು ಟೋಲ್ ಗೇಟ್‌ಗಳನ್ನು ದಾಟಲು ಮಾತ್ರವಲ್ಲ.


   ನಂತರ ಅದು ಬೇರೆ ಏನು? 

 1. ವೈದ್ಯಕೀಯ ತುರ್ತು ಸಮಯದಲ್ಲಿ ನೀವು ರಶೀದಿಯ ಇನ್ನೊಂದು ಬದಿಯಲ್ಲಿ ನೀಡಿರುವ ಫೋನ್ ಸಂಖ್ಯೆಗೆ ಕರೆ ಮಾಡಬಹುದು.  ನಿಮ್ಮ ಕರೆ ಮಾಡಿದ 10 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ತಲುಪುತ್ತದೆ.


 2. ನಿಮ್ಮ ವಾಹನಕ್ಕೆ ಕೆಲವು ಸಮಸ್ಯೆಗಳಿದ್ದರೆ ನಿಮ್ಮ ಚಕ್ರವು ಪಂಕ್ಚರ್ ಆಗಿದ್ದರೆ ನೀವು ಅಲ್ಲಿ ಉಲ್ಲೇಖಿಸಿರುವ ಇತರ ಸಂಖ್ಯೆಗೆ ಕರೆ ಮಾಡಬಹುದು ಮತ್ತು 10 ನಿಮಿಷಗಳಲ್ಲಿ ನಿಮಗೆ ಸಹಾಯ ಸಿಗುತ್ತದೆ.


 3. ನೀವು ಇಂಧನದಿಂದ ಹೊರಗುಳಿಯುತ್ತಿದ್ದರೆ ನಿಮಗೆ ಶೀಘ್ರದಲ್ಲೇ 5 ಅಥವಾ 10 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ನೀಡಲಾಗುವುದು.  ಸರಬರಾಜು ಮಾಡಿದ ಇಂಧನಕ್ಕಾಗಿ ನೀವು ಅವುಗಳನ್ನು ಪಾವತಿಸಬಹುದು ಮತ್ತು ಅದನ್ನು ಪಡೆಯಬಹುದು.


 ಟೋಲ್ ಗೇಟ್‌ಗಳಲ್ಲಿ ನೀವು ಪಾವತಿಸುವ ಹಣದಲ್ಲಿ ಈ ಎಲ್ಲಾ ಸೇವೆಗಳನ್ನು ಸೇರಿಸಲಾಗಿದೆ.  ಅನೇಕ ಜನರಿಗೆ ಈ ಮಾಹಿತಿಯಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ನಾವು ಅನಗತ್ಯವಾಗಿ ನೋವನ್ನು ಅನುಭವಿಸುತ್ತೇವೆ.  ದಯವಿಟ್ಟು ಈ ಸಂದೇಶವನ್ನು ನಿಮ್ಮ ಎಲ್ಲ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ.

Jai Sri Ram

 आपदाम्-अपहर्तारम् दातारं सर्व संपदां

ApadAm-apahartAram dAtAram sarva sampadAm

लोकाभिरामं श्रीरामम्  भूयो भूयो नमाम्यहम् ॥

lokAbhirAmam shrIramAm bhooyo bhooyo namAmyaham


I bow again and again to Sree Rama who removes (all) obstacles and grants

wealth and pleases all. 

आर्तानामार्तिहन्तारम् भीतानां भीतिनाशनं

ArtAnAmArtihantAram bheetAnAm bheeti-nAshanam

द्विषतां कालदण्डं तं रामचन्द्रं नमाम्यहम्  ॥

dvishatAm kAladanDam tam rAmchandram namAmyaham



He who annihilates the pain of the distressed, He who destroys fear in the minds 

of the fearful, He who is like the Weapon of Death to his enemies, that 

Raamachandra do I worship.

Today is Vijaya Ekadashi!.

11th day of the lunar fortnight is Vijaya Ekadashi! Per our hindu calendar we have 24 Ekadashi a year, one during sukhla paksha & other being Krishna paksha.


Each Ekadashi has its own specialty and significance. By the name itself Vijaya Ekadashi in literal meaning signifies victory over the enemy.


The significance of Vijaya Ekadashi is since the times of Ram. per legend, the sages & the saints of the Ramayan era asked Rama to observe this vrat when he wondered how he can cross the ocean to reach Lanka and free his consort, Sita.

It is known that ram offered prayers to the sea god inorder to cross the sea and reach lanka., having got answered after tiresome efforts post having consulted sages and in turn the suggested solution was that he & Sugriva's Vanar Sena observe the Vijaya Ekadashi.

As per the sages suggestion, Ram & the Vanar Sena observed the Vijaya Ekadashi Vrat & eventually built the Rama Setu to reach Lanka.

Hence it's said that those who wish to succeed in a task must observe the Vijaya Ekadashi vrat.



TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...