Saturday 25 August 2018

RakshaBandhan


While growing up as the only daughter, RakshaBandhan every year would remind me how much I missed a brother's love. But now, I have found thousands of them in the social network & public who treat me as their sister with affection 🤗😚 Happy Raksha Bandhan to all the brothers & sisters ☺😙

ನಮ್ಮ ಮೈಸೂರು..

ರಾಮಾನುಜಾ ರಸ್ತೆಯ ಶ್ರೀನಿವಾಸ ಅಗ್ರಹಾರದಲ್ಲಿ  ಭಕ್ತಕುಂಬಾರ ಖ್ಯಾತಿಯ ಹುಣಸೂರು ಕೃಷ್ಣಮೂರ್ತಿಗಳು...

ಎಂಟನೇ ಕ್ರಾಸಿನಲ್ಲಿ ಪುಟ್ಟಣ್ಣ ಕಣಗಾಲ್ ಸಹೋದರ  ಕಣಗಾಲ್ ಪ್ರಭಾಕರ ಶಾಸ್ತ್ರಿಗಳು...

ಹತ್ತನೇ ಕ್ರಾಸಿನ ಮೊದಲನೇ ಪಾರ್ಕಿನ ಮೂಲೆಯ ಮನೆಯಲ್ಲಿ ನಟ ನಿರ್ಮಾಪಕ  ಚೇತನ್ ರಾಮರಾವ್...

ಹದಿನೆಂಟನೇ ಕ್ರಾಸಿಗೆ ಬಂದರೆ ಬಲಭಾಗದ ಎರಡನೇ ಮನೆ ಹಾಸ್ಯನಟ ರತ್ನಾಕರ್ ಅವ್ರದ್ದು..

ಹತ್ತೊಂಭತ್ತರಲ್ಲಿ ಬಾಲಿವುಡ್ಡಿನ ನಿರ್ದೇಶಕ ರೋಹಿತ್ ಶೆಟ್ಟಿಯ ಅಪ್ಪ ಫೈಟರ್ ಶೆಟ್ಟಿ ಇದ್ರು...

ನೂರೊಂದು ಗಣಪತಿ ಹಿಂಭಾಗದ ಬಸವೇಶ್ವರ ರಸ್ತೆಲೇ ನಮ್ಮ ಜೂನಿಯರ್ ನರಸಿಂಹರಾಜು ಹುಟ್ಟಿ ಬೆಳೆದಿದ್ದು...

ಅದೇ ನೂರೊಂದು ಗಣಪತಿಯನ್ನು ಬಳಸಿಕೊಂಡು ನಂಜುಮಳಿಗೆ ಸರ್ಕಲ್ಲು ಹತ್ತಿ ನೈರುತ್ಯಕ್ಕೆ ಬಂದರೆ ಅಲ್ಲಿ ನಿಮಗೆ    ಸಿಗೋದು ಗೋಪಾಲ ಸ್ವಾಮಿ ಶಿಶುವಿಹಾರ... ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ ಅಲ್ಲೇ ಓದುತ್ತಾ ಇದ್ದಿದ್ದು...

ಅದೇ ದೇಗುಲದ ವಾಯುವ್ಯ ಮೂಲೆಯಲ್ಲಿದ್ದ ಚಡ್ಡಿ ಚಪಾತಿ ಗುರುಮಲ್ಲಪ್ಪ ಹೋಟೆಲಿನ ಹಿಂಭಾಗದ ಮನೆಯ ಖಾಯಂ ಸದಸ್ಯ / ಅತಿಥಿ ಕಲಾರತ್ನ ಉದಯ ಕುಮಾರ್...

ಅಲ್ಲಿಂದ ಉತ್ತರಕ್ಕೆ ತಿರುಗಿ ಸೀದಾ ಲಕ್ಷ್ಮೀಪುರಂ ಗೆ ಬನ್ನಿ... ಅಲ್ಲಿ ನೀವು "ಕುಮಾರಿ ಜಯಲಲಿತಾ" ಹುಟ್ಟಿದ ಮನೆ ಕಣ್ತುಂಬಿಕೊಳ್ಳಬಹುದು...

ಅಲ್ಲಿ ಅದನ್ನ ನೋಡ್ಕೊಂಡು ಸೀದಾ ಕೆಳಕ್ಕಿಳಿದು ಬಲ್ಲಾಳ್ ಸರ್ಕಲ್ಲು ದಾಟಿ ಕೊಪ್ಪಲ್ ರೈಲ್ವೆ ಸೇತುವೆ ಕೆಳಗೆ ಬಂದ್ರೆ... ಸರಸ್ವತಿಪುರದ ಮೂರನೇ ಮೈನಿನಲ್ಲಿ  ನಮ್ಮ ಜಲೀಲ... ಅಂಬರೀಶಣ್ಣ...

ಮೊದಲನೇ ಮೈನಿನಲ್ಲಿ ೧೯೫೧ ರಲ್ಲಿ ಬಿಡುಗಡೆಯಾದ "ಜಗನ್ಮೋಹಿನಿ" ಚಿತ್ರದ ನಾಯಕಿ ಪ್ರತಿಮಾದೇವಿ,ಮತ್ತವರ ಮಕ್ಕಳಾದ  ನಟ, ನಿರ್ಮಾಪಕ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ನಾಯಕಿ ನಿರ್ಮಾಪಕಿ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್,  ಹೀರೋ ಆದಿತ್ಯ...

ಅಲ್ಲಿಂದ ಎರಡು ಕ್ರಾಸು ಪಕ್ಕಕ್ಕೆ ರಾಮಾಚಾರಿ ಮೇಷ್ಟ್ರು... ಅಶ್ವಥ್......

ಸರಸ್ವತಿಪುರಂ ದಾಟಿ ಮಾನಸಗಂಗೋತ್ರಿ ಮುಟ್ಟಿ ಪಕ್ಕಕ್ಕೆ ಬಂದ್ರೆ ಪಡುವಾರಹಳ್ಳಿ... ಅಲ್ಲೇ ನಮ್ ಅಣ್ತಮ್ಮ  ಯಶ್...

ಅಲ್ಲಿಂದ ಸೀದಾ ಕಾಳಿದಾಸ ರಸ್ತೆಗೆ ಬನ್ನಿ... ಪಂಚವಟಿ ಜಂಗ್ಷನ್ನು ... ಎಂಪಿ ಶಂಕರ್... ಅವರ ಮನೆ ಹೆಸರೇ ಪಂಚವಟಿ... ಅದನ್ನೇ ಆ ಕೂಡು ರಸ್ತೆಗೂ ಇಟ್ಟಿದ್ದಾರೆ...

ಅಲ್ಲಿಂದ ಕೆ.ಆರ್. ಸರ್ಕಲ್ ದಾಟಿ ಕೊಂಡು ಹಾರ್ಡಿಂಗ್ಸ್ ಸರ್ಕಲ್ ಮುಟ್ಟಿ ಬಲಕ್ಕೆ ತಿರುಗಿದರೆ ಇಟ್ಟಿಗೆ ಗೂಡು... ಅಲ್ಲೇ ನಮ್ ಬಂಗ್ಲೆ ಶಾಮರಾಯರ ಮಗ ದ್ವಾರಕೀಶ್ ಹುಟ್ಟಿ ಬೆಳೆದಿದ್ದು...

 ಅಲ್ಲಿಂದ ಒಂದು ನೂರಡಿ ದೂರದಲ್ಲಿ  ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜು ಅವರ ನಿವಾಸ...

ಅಲ್ಲಿಂದ  ಕಾರಂಜಿ ಕೆರೆಗೆ ಬಿದ್ದು ಈಜಿಕೊಂಡು ಆ ಕಡೆ ದಡ ಮುಟ್ಟಿದ್ರೆ ಸಿದ್ದಾರ್ಥ ಲೇ ಔಟು.. ನಮ್ಮ ತೂಗುದೀಪ ಶ್ರೀನಿವಾಸ್ ಮನೆ ಕಟ್ಕೊಂಡಿದ್ದು... ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲೇ ಹುಟ್ಟಿ ಬೆಳೆದಿದ್ದು... ಅವರ ಸಹೋದರ ನಿರ್ಮಾಪಕ ದಿನಕರ್  ಈಗ್ಲೂ ಅಲ್ಲೇ ಇರೋದು ...

ಆಲ್ಮೋಸ್ಟ್ ಇಡೀ ಕನ್ನಡ ಚಿತ್ರರಂಗದ ಮಧ್ಯೆ .....

ನಮ್ಮ ಮೈಸೂರು

Thursday 23 August 2018

॥ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಸಣ್ಣ ಕಥೆ ॥

ಓರ್ವ ಸಿರಿವಂತ ಅವನಿಗೆ ನಾಲ್ಕು ಜನ ಮಕ್ಕಳು. ನಾಲ್ಕು ಜನ ಸೊಸೆಯಂದಿರು ಸಿರಿ - ಸಂಪದ ಯಾವುದಕ್ಕೂ ಕೊರತೆ ಇರಲಿಲ್ಲ .
ಒಂದು ದಿನ ರಾತ್ರಿ ಸಿರಿವಂತನು ಮಲಗಿರುವಾಗ ವಿಚಿತ್ರ ಕನಸು ಕಂಡ 
ಮನೆಯ ಭಾಗ್ಯಲಕ್ಷ್ಮಿ ಹೊರಗೆ ಹೋಗುತ್ತಿದ್ದಳು ಅವರೀರ್ವರ ಮಧ್ಯದಲ್ಲಿ ಸಂಭಾಷಣೆ ನಡೆಯಿತು .

ಲಕ್ಷ್ಮಿ - ಸಿರಿವಂತನೆ ನಾನು ಈಗ ಹೊರಗೆ ಹೋಗುತ್ತಿದ್ದೇನೆ ನಿನಗೆ ಏನು ವರ ಬೇಕು ಬೇಡು ಕೊಡುತ್ತೇನೆ 

ಸಿರಿವಂತ - ಈಗ ಈ ಮನೆಯ ಹೊಣೆಯನ್ನು ನನ್ನ ಮಕ್ಕಳು ಮತ್ತು ಸೊಸೆಯಂದಿರು ವಹಿಸಿಕೊಂಡಿದ್ದಾರೆ ಅವರಿಗೆ ಕೇಳಿ ಹೇಳುತ್ತೇನೆ .

ಲಕ್ಷ್ಮಿ -  ಆಗಲಿ ಅವರಿಗೆ ಕೇಳಿ ನನಗೆ ತಿಳಿಸು .

ಮರುದಿನ ಮುಂಜಾನೆ ಸಿರಿವಂತನು ತನ್ನ ಮಕ್ಕಳಿಗೆ ಕರೆದು ನಡೆದ ಸಂಗತಿಯನ್ನು ಹೇಳಿದ ಅದನ್ನು ಕೇಳಿ

 ಹಿರಿಯ ಮಗ  ಹೇಳಿದ - ನೂರು ಜನ್ಮ ಕುಳಿತು ಉಂಡರು ಸವೆಯಲಾಗದಷ್ಟು ಸಿರಿ ಸಂಪತ್ತು ಕೇಳು .

ಎರಡನೆಯ ಮಗ ಹೇಳಿದ - ಸಂಪತ್ತು ಸ್ಥಿರವಲ್ಲ ಯಾರಾದರೂ ಕಳವು ಮಾಡಬಹುದು ಅಲ್ಲವೇ  ಕಸಿದುಕೊಳ್ಳಬಹುದು ಭೂಮಿಯನ್ನು ಮಾತ್ರ ಯಾರೂ ಕಳವು ಮಾಡಲಾರರು ಕಸಿದುಕೊಳ್ಳಲಾರರು ಸಾವಿರಾರು ಎಕರೆ ಭೂಮಿಯನ್ನೇ ಕೇಳಿ ಬಿಡಿ 

ಮೂರನೇ ಮಗ ಹೇಳಿದ - ಈ ಸಿರಿ ಸಂಪದ ಭೂಮಿ ಸೀಮೆ ಏನು ಮಾಡುವುದು ನಮ್ಮ ಕೈಯಲ್ಲಿ ಅಧಿಕಾರ ಇಲ್ಲದಿದ್ದರೆ
 ಸಿರಿ ಸಂಪದ ಭೂಮಿ ಸೀಮೆ ಯಾವುದೂ ಸ್ಥಿರವಲ್ಲ ಆದುದರಿಂದ ಎಂದೆಂದಿಗೂ ನಮ್ಮ ಕೈ ಬಿಡಲಾರದಂಥ ಅಧಿಕಾರವನ್ನೇ ಕೇಳಿ ಬಿಡಿ  

ಈಗ ನಾಲ್ಕನೆಯವನ ಸರದಿ ಅವನು ಹೇಳಿದ - ನನಗಿಂತಲೂ ನನ್ನ ಹೆಂಡತಿ ತುಂಬಾ ಜಾಣೆ ಅವಳು ತುಂಬಾ ದೈವಭಕ್ತಳು  ಇಂಥ ವಿಚಾರದಲ್ಲಿ ಅವಳನ್ನು ಕರೆದು ಕೇಳುತ್ತೇನೆ 
ಚಿಕ್ಕ ಮಗನ ಹೆಂಡತಿ ಬಂದು ಹೇಳಿದಳು 
ನಾನು ಕಿರಿಯಳು ನಾನೇನು ಬಲ್ಲೆ ? ಆದರೂ ತಾವು ನನ್ನನ್ನು ಕರೆದು  ಕೇಳಿರುವಿರೆಂದು ಹೇಳುತ್ತೇನೆ ಕೇಳಿ .

ನಮಗೀಗ ಈ ಮನೆಯಲ್ಲಿ ಸಿರಿ ಸಂಪದ ಯಾವುದಕ್ಕೂ ಕೊರತೆಯಿಲ್ಲ ಲಕ್ಷ್ಮಿಯೂ ಹೋದ  ಮೇಲೆ ಅವಳು ಕೊಡುವ ಸಿರಿ ಸಂಪದವಾದರೂ ನಮ್ಮಲ್ಲಿ ಇರಲು ಹೇಗೆ ಸಾಧ್ಯ  ? 

ನಾವೆಲ್ಲರೂ ಈ ಮನೆಯಲ್ಲಿ ಪ್ರೀತಿಯಿಂದ
 ಬಾಳಿ ಬದುಕುತ್ತಿದ್ದೇವೆ ಮುಂದಾದರೂ ಈ ಪ್ರೀತಿ ಹೀಗೆ ವರ್ತಿಸುತ್ತೀರಲಿ 
 ಎಂದು ಲಕ್ಷ್ಮಿಗೆ ಕೇಳಿರಿ  ಕಿರಿಯ ಸೊಸೆ ಮಾತು ಎಲ್ಲರಿಗೂ ಹಿಡಿಸಿತ್ತು 

ಅದೇ ರೀತಿ ಆ ಮನೆಯ ಯಜಮಾನ
 ಲಕ್ಷ್ಮಿಗೆ ಕೇಳಿದ - ತಾಯಿ ನಮಗೆ ಯಾವ 
ಸಿರಿ ಸಂಪದವು ಬೇಡ ನಾವೆಲ್ಲರೂ ಹಿಂದಿನಂತೆ ಮುಂದೆಯೂ ಪ್ರೀತಿಯಿಂದಿರುವಂತೆ ಕರುಣಿಸು 

ಈ ಮಾತನ್ನು ಕೇಳುತ್ತಲೇ ಹೊರಗೆ ಹೋಗುತ್ತಿದ್ದ ಲಕ್ಷ್ಮೀಯು ಮತ್ತೆ ಮನೆಯ ಒಳಗೆ ಬಂದು ಕುಳಿತಳು .

ಸಿರಿವಂತ - ಮನೆಯಿಂದ ಹೋಗಲಣಿಯಾದವಳು ಮತ್ತೆ ಒಳಗೆ ಬಂದಿದ್ದನ್ನು ಕಂಡು ನನಗೆ ಸಂತೋಷವಾಗಿದೆ ತಾಯಿ ನಿನಗೆ ಅನಂತ ಧನ್ಯವಾದಗಳು 

ಲಕ್ಷ್ಮಿ -  ನಾನು ಒಳಗೆ ಬಂದಿರುವುದೇಕೆ ತಿಳಿಯಿತೇ ?

ಸಿರಿವಂತ - ಇಲ್ಲಾ ತಾಯಿ ನನಗೇನೂ ತಿಳಿಯಲಿಲ್ಲ 

ಲಕ್ಷ್ಮೀ-  ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲೇ ನಾನಿರುವುದು ಆದುದರಿಂದ ನಾನು ತಿರುಗಿ ಬಂದೆ.

 ಈ ಮಾತನ್ನು ಕೇಳಿದ ಕೂಡಲೇ ಪ್ರೀತಿಯೇ ನಿಜವಾದ ಸಿರಿ ಸಂಪದವೆಂದು ಸಿರಿವಂತನ ಕುಟುಂಬದವರಿಗೆಲ್ಲ ಮನದಟ್ಟಾಗಿತ್ತು .

ಎದೆಯಲ್ಲಿ ಪ್ರೀತಿ ಮುಖದಲ್ಲಿ ನಗೆ ಇಲ್ಲದಿದ್ದರೆ  ಮನೆಯಲ್ಲಿ ಎಷ್ಟು ಸಿರಿ ಸಂಪದ ವಿದ್ದರೆ 
ಅದಕ್ಕೇನು ಬೆಲೆ ! 

ಎಲ್ಲರೂ ತಮ್ಮ  ಕುಟುಂಬದವರೊಂದಿಗೆ ಪ್ರೀತಿಯಿಂದ  ನಗುನಗುತ್ತಾ  ವರಮಹಾಲಕ್ಷ್ಮಿಯ ಹಬ್ಬವನ್ನು  ಆಚರಿಸಿರಿ 🙏🙏🙏

ಧನ್ಯವಾದಗಳು 

 🙏🙏🙏

Wednesday 22 August 2018

ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:

ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು  ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ  "ಅಹಂ ಬ್ರಹ್ಮಾಸ್ಮಿ" " ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು" ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ  ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.

೧.ಪ್ರ:  ಉಪಾಕರ್ಮ ಎಂದರೇನು ?

ಉ:  "ಉಪಾಕರ್ಮ" ಅಥವಾ ಉಪಕ್ರಮ ಎಂದರೆ ಪ್ರಾರಂಭ.

೨.ಪ್ರ: -  ಯವುದರ ಪ್ರಾರಂಭ ?

ಉ: ವೇದಾಧ್ಯಯನದ ಪ್ರಾರಂಭ.

೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?

ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
"ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ "
ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ  ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.

೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?

ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ  ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ   ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.

೬.  ವೇದವ್ರತಗಳಾದ  ಈ  ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?

ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ  ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು  ಮಾಡಲೇಬೇಕೆಂಬ ನಿಯಮವಿಲ್ಲ. 

೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?

ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.

೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?

ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.
ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು  (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ)   ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.
ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ  ಉತ್ಸರ್ಜಿಸುವ ಕ್ರಮ.

೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?

ಉ: ಇವುಗಳು   ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.

೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?

ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.

೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?

ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?

ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?

ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ  ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ  ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.

೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?

ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.
ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.

ಹರಿಃ ಓಂ ತತ್ ಸತ್ ||

Monday 20 August 2018

ಸಸ್ಯಗಳ ವೈಜ್ಞಾನಿಕ ಹೆಸರು

1. ಭತ್ತ – ಒರೈಸಾ ಸಟೈವಾ
2. ರಾಗಿ – ಎಲುಸಿನ ಕೊರಕಾನ
3. ಗೋಧಿ – ಟ್ರಿಟಿಕಮ್ ಏಸ್ಟಿವಮಂ
4. ಹತ್ತಿ – ಗೋಸಿಪಿಯಂ
5. ಮುಸುಕಿನ ಜೋಳ – ಜಿಯಾ ಮೇಜ್
6. ತೆಂಗು – ಕಾಕಸ್ ನ್ಯೂಸಿಫೆರಾ
7. ಅಡಿಕೆ – ಅರೆಕಾ ಕಟಾಚು
8. ಮಾವು – ಮ್ಯಾಂಜಿಫರ್ ಇಂಡಿಕಾ
9. ಸೂರ್ಯಕಾಂತಿ – ಕಾರ್ತಮಸ್ ಟಿಂಕ್ಟೋರಿಯಸ್
10. ಕಿತ್ತಲೆ – ಸೆಟ್ರಸ್ ರೆಬಿಕ್ಯುಲೇಟಾ
11. ಈರುಳ್ಳಿ – ಆಲಿಯಂಸಿಪ
12. ಸೌತೆಕಾಯಿ – ಕುಕುಮಿಸ್ ಸಟೈವಸ್
13. ಬೆಳ್ಳುಳ್ಳಿ – ಆಲಿಯಂ ಸಟೈವ
14. ಶುಂಠಿ – ಜಿಂಜಿಬೆರಾ ಅಫಿಸಿನಾಲಿಸ್
15. ಆಲೂಗಡ್ಡೆ – ಸೋಲನಂ ಟ್ಯೂಬರೋಸಂ
16. ಕಾಫಿ –ಕಾಫಿಯೂ ಅರಾಬಿಕ್
17. ಶ್ರೀಗಂಧ -ಸ್ಯಾಂಟಾಲಂ ಇಂಡಿಕಾ
18. ಏಲಕ್ಕಿ – ಎಲಕ್ಯಾರಿಯಾ ಕಾರ್‍ಡಾಮೋಮಾ
19. ಲವಂಗ –ಯೂಜನಿಯಾ ಕಾರ್‍ಯೋಫಿಲ್ಲಾಟ
20. ದನಿಯಾ – ಕೋರಿಯಾಂಡರ್ ಸಟೈವಂ
21. ಪೈನ್‍ಆಫಲ್ – ಅನ್ನಾಸ್ ಕೊಮೋಸಸ್
22. ಮೂಲಂಗಿ – ರಫಾನಸ್ ಸಟೈವಸ್
23. ಸಾಸುವೆ -ಬ್ರಾಸಿಕಾ ನಿಗ್ರಾ
24. ಕರಿಬೇವು – ಮುರ್ರಾಯ ಯಾನಿಗಿ
25. ಬಿದಿರು -ಬ್ಯಾಂಬೂಸ
26. ಹುಣಸೆ –ಟ್ಯಾವರಿಂಡಾ ಇಂಡಿಕಾ
27. ಉದ್ದು – ಫಿಸಿಯೋಲಸ್ ಮುಂಗೋ
28. ಮೆಣಸಿನಕಾಯಿ – ಕ್ಯಾಪ್ಸಿಕಂ ಅನ್ನಂ
29. ಕಡಲೆ – ಸಿಸೆರ್ ಏರಿಯೇಟಿನಮ್
30. ಬಾಳೆ – ಮ್ಯೂಸ ಪ್ಯಾರಡಿಸಿಯಾಕಾ

Wednesday 8 August 2018

ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ!

ಕೇಶವಾಯ ಸ್ವಾಹಾ
ನಾರಾಯಣಾಯ ಸ್ವಾಹಾ
ಮಾಧವಾಯ ಸ್ವಾಹಾ

ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ,ಶಬ್ದವು ಸುಗಮವಾಗಿ ಗಂಟಲಿನಿಂದ ಬರಲಿ ಎಂಬ ಉದ್ದೇಶದಿಂದ ನಮ್ಮ ಋಷಿ ಮುನಿಗಳು ನಮಗೆ ತೋರಿಸಿದ ಸರಳ ಮಾರ್ಗ.

ಕೇಶವಾಯ ಸ್ವಾಹಾ - ಈ ಮಂತ್ರವು ಗಂಟಲಿನಿಂದ ಹೊರಡುತ್ತದೆ. ಹೀಗೆ ಉಚ್ಚರಿಸುವಾಗ ಗಂಟಲಿಗೆ ಸಂಬಂಧಪಟ್ಟ ಸ್ನಾಯು ಮತ್ತು ನರಗಳಿಗೆ ವ್ಯಾಯಾಮ ಕೊಡುವುದೇ ಈ ಮಂತ್ರದ ಉದ್ದೇಶ.

ನಾರಾಯಣಾಯ ಸ್ವಾಹಾ - ಈ ಮಂತ್ರವು ನಾಲಗೆಯ ಸಹಾಯದಿಂದ ಹೊರಡುತ್ತದೆ.ಈ ಮಂತ್ರ ನಾಲಿಗೆಗೆ ಸಂಬಂಧಪಟ್ಟ ನರಗಳಿಗೆ ವ್ಯಾಯಾಮ ಕೊಡುತ್ತದೆ.

ಮಾಧವಾಯ ಸ್ವಾಹಾ - ಈ ಮಂತ್ರವು ತುಟಿಗಳ ಸಹಾಯದಿಂದ ಹೊರಡುತ್ತದೆ.
ಈ ಮೇಲಿನ ಮಂತ್ರಗಳನ್ನು ಅನೇಕ ಸಾರಿ ಉಚ್ಚಾರ ಮಾಡುವುದರಿಂದ, ಗಂಟಲು, ನಾಲಿಗೆ, ತುಟಿಗಳಿಗೆ ಸಂಬಂದಪಟ್ಟ ಸ್ನಾಯುಗಳಿಗೆ ಏಕಕಾಲದಲ್ಲಿ ವ್ಯಾಯಾಮ ಕೊಟ್ಟಂತಾಗುತ್ತದೆ. ಹೀಗೆ ಅನೇಕ ಸಾರಿ ಜಪಿಸುವುದರಿಂದ ಮುಂದೆ ಹೇಳಬೇಕಾದ
ಮಂತ್ರಗಳು ಶುದ್ದವಾಗಿ ಸ್ಪುಟವಾಗಿ ಹೊರಡುತ್ತದೆ. ಶರೀರಶಾಸ್ತ್ರವು ಏನು ಹೇಳುತ್ತದೋ ಅದನ್ನು ಒಂದು ಆಚರಣೆಯಂತೆ ಆಚರಿಸಲು ಧಾರ್ಮಿಕ ಕಾರಣ ಕೊಟ್ಟು ನಮ್ಮ ಹಿಂದಿನ ಋಷಿ ಮುನಿಗಳು ಕಡ್ಡಾಯವಾಗಿ ಮಾಡಲು ತಿಳಿಸಿದ್ದಾರೆ.

ಪೂಜೆಗೆ ಕುಳಿತ ಬ್ರಾಹ್ಮಣರು ಮಂತ್ರ ಮಾಡುವಾಗ ಪದೇ ಪದೇ ಅಂಗೈಯಲ್ಲಿ ನೀರನ್ನು ಹಾಕಿ ಇದೇ ಮಂತ್ರವನ್ನು ಹೇಳುತ್ತಾರೆ.
ಕಾರಣ ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯುವ ಕಾರಣ ಅಂಗೈಯಲ್ಲಿ ಇರುವ ವಿದುಚ್ಛಕ್ತಿಯ ಸ್ವಲ್ಪ ಭಾಗ ನೀರಿನಲ್ಲಿ ಬೆರೆಯುತ್ತದೆ, ಆ ನೀರನ್ನು ಕುಡಿದರೆ ಅದು ಹೊಟ್ಟೆಗೆ ಹೋಗಿ ಅಲ್ಲಿರುವ ವಿದ್ಯುತ್ತಿನ ಜೊತೆ ಬೆರೆತು ಶರೀರದಾದ್ಯಂತವೂ ಒಂದೇ ಸಮನೆ ಇರುವಂತೆ ಮಾಡುತ್ತದೆ. ಈ ಕಾರಣದಿಂದ ನೀರನ್ನು ಅಂಗೈಯಲ್ಲಿಯೇ ಹಾಕಿ ಕುಡಿಯಬೇಕು.

ವೈಜ್ಞಾನಿಕ ಕಾರಣಗಳಿಗಿಂತ ಆಧ್ಯಾತ್ಮಿಕ ಲಾಭಕ್ಕಾಗಿ, ಈಶ್ವರಪ್ರಾಪ್ತಿಗಾಗಿ, ಭಾವದಿಂದ ಇಂತಹ ಕೃತಿಗಳನ್ನು ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಏಕೆಂದರೆ ವ್ಯಾಯಮ ಆಗಲು ಮಂತ್ರಗಳನ್ನೇ ಹೇಳಬೇಕೆಂದಿಲ್ಲ. ಯೋಗಾಸನಗಳನ್ನು ಮಾಡಿದರೂ ಶರೀರದ ವ್ಯಾಯಾಮವಾಗುತ್ತದೆ. ಇಂತಹ ವೈಜ್ಞಾನಿಕ ವಿವರಣೆಗಳಿಂದ ಮನುಷ್ಯನಿಗೆ ಕೇವಲ ಶಾರೀರಿಕ ಲಾಭವಾಗುತ್ತದೆ. ಆಸ್ತಿಕ ಬಂಧುಗಳು ಆಚಮನ ಮಾಡುವಾಗ ಶರೀರಕ್ಕಾಗುವ ವ್ಯಾಯಾಮದ ಕಡೆ ಗಮನ ಕೊಡದೇ, ಕೇಶವ, ನಾರಾಯಣ, ಮಾಧವ ಎಂಬ ನಾಮದಲ್ಲಿರುವ ಭಗವಂತನನ್ನು ಸ್ಮರಿಸಬೇಕು. ಇದರಿಂದಲೇ ನಮ್ಮ ನಿಜವಾದ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯ.

Saturday 4 August 2018

ನಮ್ಮೆಲ್ಲರ ಆರೋಗ್ಯದ ಗುಟ್ಟು ಈ 35 ಸೂತ್ರಗಳಲ್ಲಡಗಿದೆ

1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.
2. ನಿದ್ದೆಯಿಂದೆ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.
3. ಐಸ್ ಕ್ರೀಂ ತಿನ್ನಲೇ ಬಾರದು.
4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.
5. ತಂಪು ಪಾನೀಯವನ್ನು ಸೇವಿಸಲೇ ಬಾರದು.
6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ40 ನಿಮಿಷಗಳ ಒಳಗೆ ತಿನ್ನಬೇಕು.
7.ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.
9. ಬೆಳಿಗ್ಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.
10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.
11. ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.
12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.
13. ಕುಳಿತುಕೊಂಡು ಊಟ ಮಾಡಬೇಕು.
14.ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.
16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.
17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.
18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.
19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.
20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.
21. ರಾತ್ರಿ ಊಟದ ನಂತರ ಒಮದು ಕಿ.ಮೀ ದೂರ ನಡೆಯಬೇಕು.
22. ರಾತ್ರಿ ಊಟವಾದ ಒಮದು ಗಂಟೆಯ ನಂತರ ಹಾಲು ಕುಡಿಯಬೇಕು.
23. ರಾತ್ರಿವೇಳೆ ಲಸ್ಸೀ, ಮಜ್ಜಿಗೆ ಕುಡಿಯ ಬಾರದು.
24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.
25. ರಾತ್ರಿ 9-10 ಗಂಟೆಗೆ ಮಲಗಬೇಕು.
26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.
27. ರಾತ್ರಿ ಸಲಾಡ್ ತಿನ್ನಬಾರದು.
28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.
29. ಟೀ, ಕಾಫೀ ಕುಡಿಯದಿರಲು ಪ್ರಯತ್ನಿಸಿ.
30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.
31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.
32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
33. ಜೂನ್ ನಿಂದ ಸೆಪ್ಟೆಂಬರ್ ( ಮಳೆಗಾಲ) ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.
35. ಊಟಮಾಡುವಾಗ ನೀರು ಕುಡಿಯ ಬಾರದು.
ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.
-ಮಾಹಿತಿ ಸಂಗ್ರಹ

Sapthaswara's are 7 Gods

SA  -is Agni Bhagawan
RE  - is Brhma
GA  -is Saraswathi
MA - is Shiva
PA  -is Vishnu
DHA - is Ganesha
NI - is Surya Bhagawan

Every Raga is a medicine, Every Raga is a Mantra, Every Raga Have healing powers. swami said some of the Ragas how it will cure our health problems. When we sing bhajans in all these Raga's, that raga's will cure lot of our mental worries and health problems. Let us see the raga's and how it works in out body :-

Every day swami was enjoying bhajan in his Sthoola form or when he was physically present. He ask the students to sing bhajans every day. Sometimes swami will ask the students some particular songs, particular Raga. Swamis said, " When my students sing a bhajan in a particular Song in a Particula Raga, that it self will travel the whole prashanthi Nilayam and heal many devotees problems. You all may think Swami is enjoying bhajan. Swami adding his divine powers into the Saptham of a particular song and heal who are sitting and listening the bhajans. Every Raga when it mix with the divine names or glory of gods, it will generate a spiritual power to purify you. Hanuman always Chant RAM RAM RAM that sound itself made him Chiranjeevi. Naradha always singing bhajans of Vishnu, it made him always blissful and happy. The first step to reach bhagawan is Bhajan. Swami told me lot of raga's and its spiritual healing powers, sharing some of them here: -

01. Ahir Bhairav -Gives free relaxed feeling and mitigates dust allergies and skin disease. Good for arthritic conditions

02. Amrutavarshini - Ushana vyathi nasini ( alleviates diseases related to heat)

03. Ananda Bhairavi - Supresses stomach pain in both men and women. Reduces kidney type problems. Controls blood pressure

04. Bagesri - Helps in attaining Guru's grace. Arouses a feeling of darkness, stability, depths and calmness. This raga is also used in treatment of diabetes and hypertension.

05. Bhairavi - Reduces anxiety, pressures, skin, disease, allergies

06. Bhupala - To awaken someone out of deep sleep

07. Charukesi - 26th raga in the melakarta scale (parent) of the south Indian classical music. Rejuvenates the mind helping one to age gracefully. It enlivens the singer and listener.

08. Desh - The suppression of the senses releases a negative force. The process of sublimation needs a spiritual path. Rag Desh can provide that. Its energy gives the listener serenity, peace, inner joy, right valor, universal love and patriotism

09. Dwijavanti - Quells paralysis and sicorders of the mind

10. Ganamurte - Helpful in diabetes

11. Hamsadhwani - Energy giving. Provides good thinking, chaitanya. Sarvarogaharini (panacea)

12. Hemavati - Good for joint and back pain

13. Hindolam - Improves digestive power. Cures stomach related. problems

14. Kalyani - Gives energy and removes tension and acts as general tonic. Dispels the darkness of fear; Gives motherly comfort and increases confidence. Kalyani means mangalam. Recited with faith and devotion, it is believed to clinch marriage alliances. Many authentic reports exist about the raga's power to destroy fear in many forms: fear of poverty, of love, of power, of ill-health, of death, and so on.

15. Kapi - Sick patients get ove their depression, anxiety. Reduces absent mindedness

16. Karaharapriya - Curative for heart disease and nervous irritablility, neurosis, worry and distress.

17. Kedaram - Gives energy and removes tension

18. Keervani - Promotes dhyana (meditation) at mental and physical levels

19. Kokilam - Helps to prevent stone formation, burning sensations, sleeplessness and anxiety.

20. Madhuvarshini - Good for nerves. Cures diseases like slight headache, sleeplessness, and sinus problems.

21. Madhyamavati - Clears paralysis, giddiness, pain in legs/hands, etc. and nervous complaints

22. Malaya Maruta -To awaken someone out of deep sleep

23. Maya Malava Gowla - Counters pollution. It can be called the Gateway to Carnatic music. The history of Camatic music says that the blessed musician, Purandaradasar, introduced the system of Mayamalava gowla. This raga has the power to neutralize toxins in the body. Practicing it in the early hours of the morning, in the midst of nature will enhance the strength of the vocal chords.

24. Mohanam - Mohanam is present where beauty and love coexist. It filters out the ill-effects of kama (desire for sex) , krodha (anger) and moha (lust), bestowing immense benefits on the listener. Also said to sures chronic headaches, indigestion, and depression.

25. Neelambari - To get rid of insomnia & to get good sleep and mental peace

26. Ranjani - Cures kidney disease

27. Rathipathipriya - Adds strengh and vigor to a happy wedded life. This 5-swara raga has the power to eliminate poverty. The prayoga of the swaras can wipe off the vibrations of bitter feelings emitted by ill will

28. Rohini - Cures back pain, joint pain, etc.

29. Sama - Makes mind sober, tranquil, induces good sleep. Good for world peace.

30. Saramati - Elevates from depressed state. Cures balagraha dosham in children ( undiagnoses crying and imitability). For sleeplessness, itching, eye and ear problems, skin problems, and the problems of hearing irregular sounds

31. Sindu Bhairavi - Removes sins and sorrows and saves from unforesenn events

32. Sivaranjani -Powerful raga for meditation; bestows benevolence of God. Removes sadness, ushana roga santi (diseases related to excess heat). Good for general health

33. Sandhya Kalyani - Cures ear, nose and eye diseases. Relieves chronic clods. Gives good sleep and freshness

34. Shankarabharanam - The power of this raga is incredible. It cures mental illness, soothes the turbulent mind and restores peace and harmony. If rendered with total devotion for a stipulated period, it can cure mental disorders said to be beyond the scope of medical treatment. It also is said to have the power to shower wealth.

35. Shanmugapriya - Sharpens the intellect of the singer as well as the listener. Instills courage in one's mind and replenishes the energy in the body.

36. Subhapantuvarali - Alleviates mental dilemmas and indecisiveness

37. Suddha dhanyasi - Remover of sorrows. Gives a happy feeling. Tonic for nerves. Cures rhinitis and migraine.

38. Suruti - Mitigates stomach burn, insomnia, fear, disgust

39. Vakulabharanam - Alleviates asthma, bronchitis, heart disease, depression, skin disease and skin

40. Varali - Varali is good for vayu tatva, heart, skin ailments and gastric problems.

41. Vasanta / Vasanti - Controls high and low blood pressure, cures heart as well as nervous diseases. Can dear the fog of confusion when a series of medical tests has to be analysed. It heals nervous breakdowns.

42. Vasantha - Cures paralysis

43. Viswambari - General tonic, acts quickly

44. Raga Pooriya Dhansari (Hamsanandi-Kamavardini ) – evokes sweet, deep, heavy, cloudy and stable state of mind and prevents acidity..

45. Raga Darbari (Darbari Kanada) – is considered very effective in easing tension. It is a late night raga composed by Tansen for Akbar to relieve his tension after hectic schedule of the daily court life.

46. Raga Todi – give treamendous relief to patients of high blood pressure.

47. Raga Malkauns – helps to cure low blood pressure.

48.  Raga Malhar – Useful in the treatment of asthma and sunstroke.

49. Raga Hindol & Marava – These ragas are useful in blood purification.

50. Varali - Varali is good for vayu tatva, heart, skin ailments and gastric problems.

51. Yamuna Kalyani - Gives freshness and dynamism

Friday 3 August 2018

Any body who is too much stressed or confused should read this again and again.....I got all my answers..Try this..


A rare conversation between Krishna & Today's Arjun. Read it loud to family,
it's one of the best message I have come across.

1. Arjun: I can’t find free time. Life has become hectic.

Krishna: Activity gets you busy. But productivity gets you free.

2. Arjun: Why has life become complicated now ?

Krishna: Stop analyzing life. It makes it complicated. Just live it.

3. Arjun: Why are we then constantly unhappy?

Krishna: Worrying has become your habit. That’s why you are not happy.

4. Arjun: Why do good people always suffer ?

Krishna: Diamond cannot be polished without friction. Gold cannot be purified without fire. Good people go through trials, but don’t suffer.

With that experience their life becomes better, not bitter.

5. Arjun: You mean to say such experience is useful ?

Krishna: Yes. In every term, Experience is a hard teacher. It gives the test first and the lessons later.

6. Arjun: Because of so many problems, we don’t know where we are heading.

Krishna: If you look outside you will not know where you are heading. Look inside. Eyes provide sight. Heart provides the way.

7. Arjun: Does failure hurt more than moving in the right direction ?

Krishna: Success is a measure as decided by others. Satisfaction is a measure as decided by you.

8. Arjun: In tough times, how do you stay motivated ?

Krishna: Always look at how far you have come rather than how far you have to go. Always count your blessing, not what you are missing.

9. Arjun: What surprises you about people?

Krishna: When they suffer they ask, "why me?" When they prosper, they never ask "Why me ?"

10. Arjun: How can I get the best out of life ?

Krishna: Face your past without regret. Handle your present with confidence. Prepare for the future without fear.

11. Arjun: One last question. Sometimes I feel my prayers are not answered.

Krishna: There are no unanswered prayers. Keep the faith and drop the fear. Life is a mystery to solve, not a problem to resolve. Trust me. Life is wonderful if you know how to live.

Stay blessed and

Stay Happy Always...

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...