Saturday 4 May 2019

Kannada Cinema: Does Dr. Rajkumar deserve the respect he gets?

  1. Show me the actor who had all the film with only'U' certificate . The only actor in the world who got 'U' certificate to all his 208 film
  2. His about almost all films are super hit . Ok forget about 8 films we can consider his 200 hit films . Can you name some actor.?
  3. His acting was so effective that even the Telugu great actor NTR fell to his feet in Chennai studio and made the kannada film to be shot on afternoon instead of night ( Those days Morning Tamil films shooting till afternoon than Telling afternoon to night than kannada films night to morning )
  4. He is the only actor who worked for industry rather to make his career more great . Many thousands of chances came from many languages including Hindi , Bengali , Malayam but he refused because he was trying to improve sandalwood
  5. He is fastest man to complete his 100th film . From 1953 to 1968 . No actor I didn't heard about this record . If you know you can say
  6. The actor who is top and greatest actor of all time in Tamil MJR and Hindi top actor Amitabh bachchan said if Rajkumar entries Tamil or Hindi movies there will be no chance for them
  7. First James Bond actor in India
  8. He has acted almost every character you know even robber , police, god , demon , Romance , love failure , blind person , devotee of God , Comedy , Forest officer etc etc . 208 films 208 different characters
  9. Unfortunately got only one national award for his acting but he got Dada Saheb Palke too he got national award for even in singing and padmabhushan
  10. He got 13 state award , 8 filmfare , Karnataka Rathna and he is the first actor to recieve doctorate from any University . He got it from Mysore University
  11. He is the first actor to consider his fans are god
  12. He had never smoke or drink both in on and off screen
  13. Even in the promotion of 2.0 rajnikanth stated has 10 MJR's are equal to 1 Rajkumar
  14. He is the only actor in India to recieve ' Kentucky colonal award from USA . List never end
  15. Thanks for asking this question and learn about the legendary who is most underrated actor compared to other India actor . He is famous in Karnataka but no one hardly knows about Rajkumar

Thursday 2 May 2019

*ಮೋಹ*

ಮಾನವನ ಬದುಕೇ ಹೀಗೆ.
ಕಷ್ಟಪಟ್ಟು ದುಡಿದು
ಮಕ್ಕಳಿಗಾಗಿ ಸಂಪತ್ತು ಗಳಿಸಿ
ಕೊನೆಗೆ ಹಸಿವು ಹಸಿವು ಅಂತಾ
ಕೈಯಲ್ಲಿ ಸಂಪತ್ತನ್ನೆ ಹಿಡಿದು
ಅದೆಷ್ಟೋ ಜನ ಮರಣವನ್ನಪ್ಪಿದ್ದಾರೆ.

ಅಂತಹ ಮೋಹದ ನಿಧಿಯ
ಕಥಾಹಂದರ..........

ಒಂದು ಯುರೋಪಿಯನ್‌ ಕಥೆ.

ಒಬ್ಬ ಮನುಷ್ಯ ಆಯುಷ್ಯದ ತುಂಬಾ ದುಡಿದು ಅಪಾರ ಸಂಪತ್ತು ಗಳಿಸಿದ್ದ.
ಒಂದು ದೊಡ್ಡ ಮಹಡಿಯ ಮನೆಯ ಕಟ್ಟಿಸಿದ್ದ.
ಮನೆಯ ತುಂಬ ಬಂಧುಬಳಗವಿತ್ತು. ಯಾವುದಕ್ಕೇನೂ ಕೊರತೆಯಿರಲಿಲ್ಲ .
ಈಗ ಆತನಿಗೆ 80 ವರ್ಷ ವಯಸ್ಸು.
ಈ ಮುದುಕ ತನ್ನ ಮನೆಯ ಕೆಳಗೊಂದು ನೆಲಮನೆಯ ಮಾಡಿಸಿದ್ದ.
ಅದರಲ್ಲಿ ತಾನು ಗಳಿಸಿದ್ದ ಸಂಪತ್ತನ್ನೆಲ್ಲ ಸಂಗ್ರಹಿಸಿ ಗುಪ್ತವಾಗಿಟ್ಟಿದ್ದ.
ಅದು ವಿಶೇಷವಾದ ಗಾಳಿ,ಬೆಳಕು ಇರಲಾದ ಕತ್ತಲೆಯ ಕೋಣೆ.

ಅಲ್ಲೊಂದು ಮೇಣದ ಬತ್ತಿ, ಕಡ್ಡಿ ಪೆಟ್ಟಿಗೆ ಇಟ್ಟಿದ್ದ.
ತನಗೆ ಸಂಪತ್ತನ್ನು ನೋಡುವ ಆಶೆಯಾದಾಗ ಯಾರಿಗೂ ಹೇಳದೆ ಒಬ್ಬನೇ ಬಂದು ನೋಡಿಕೊಂಡು ಹೋಗುತ್ತಿದ್ದ.

ಒಂದು ದಿನ ಮಧ್ಯರಾತ್ರಿ
ಮುದುಕನಿಗೆ ಎಚ್ಚರವಾಯಿತು.
ಮೋಹದ ನಿಧಿಯ ನೋಡುವ ಅಪೇಕ್ಷೆಯಾಯಿತು, ಎದ್ದ
ಮನೆಯವರೆಲ್ಲ ಮಲಗಿದ್ದಾರೆ.
ಮುದುಕ ನೆಲಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ.
ದೀಪ ಬೆಳಗಿಸಿದ.
ಕಣ್ತುಂಬ ನಿಧಿಯ ನೋಡಿ ಸಂತಸಪಟ್ಟ.
ಹಾಗೇ ಎಷ್ಟು ಹೊತ್ತು ನಿಧಿಯ ನೋಡುತ್ತ ಮೈಮರೆತು ಕುಳಿತಿದ್ದನೋ ಏನೋ ?

ಈತನ ಜಡಸಿರಿಯನ್ನೆಲ್ಲ ಬೆಳಗುತ್ತಿದ್ದ ಏಕೈಕ ದೀಪ ನಂದುವ ಸಮಯವಾಯಿತು.
ಮೇಲೆದ್ದು ಬಾಗಿಲು ತೆಗೆಯಲು ಹೋದ. ಬಾಗಿಲು ತೆಗೆಯಲಿಲ್ಲ .
ಅದೇಕೋ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು.
ಮತ್ತೆ ಮತ್ತೆ ಪ್ರಯತ್ನಿಸಿದ.
ಮುದುಕನ ದುರಾಶೆಗೆ ಮೈ
ಸೋತು ಸಣ್ಣಾಗಿತ್ತು.

ಬಾಗಿಲು ತೆಗೆಯಲು ಶಕ್ತಿ ಸಾಲಲಿಲ್ಲ.
ಮುದುಕ ಗಾಬರಿಯಾದ.
ಅಷ್ಟರಲ್ಲಿ ದೀಪವೂ ನಂದಿತು. ಮುದುಕನಿಗೆ ಜಗತ್ತೆಲ್ಲ ಈಗ ಶೂನ್ಯವಾಯಿತು.

ಸ್ವಲ್ಪ ಸಮಯದ ನಂತರ ಹೊರಗೆ ಬೆಳಕಾಗಿತ್ತು.
ಮುದುಕನ ಪಾಲಿಗೆ ಮಾತ್ರ ಕತ್ತಲೆ ಶಾಶ್ವತವಾಗಿತ್ತು.
ಮಕ್ಕಳು ಮೊಮ್ಮಕ್ಕಳೆಲ್ಲ ಎದ್ದರು.
ಮುದುಕ ಕಾಣಲಿಲ್ಲ.
ಮನೆಯೆಲ್ಲ ನೋಡಿದರು.
ಊರೆಲ್ಲ ಹುಡುಕಿದರು.
ಮುದುಕ ದೊರೆಯಲಿಲ್ಲ.
ಕಳೆದಿದ್ದರಲ್ಲವೆ ದೊರೆಯುವುದು.

ತಮ್ಮ ಮನೆಯ ಕೆಳಗೆಯೇ ನಶ್ವರ ಸಿರಿಯ ಮೋಹದಲ್ಲಿ ಮುಳುಗಿದ್ದ ಮುದುಕನನ್ನು ಅವರು ಕಾಣದೇ ಹೋದರು.
ದಿನಗಳೆದಂತೆ ಮನೆಯವರೆಲ್ಲ ಮುದುಕನನ್ನು ಮರೆತೇಬಿಟ್ಟರು.

ನೆಲಮನೆಯಲ್ಲಿದ್ದ ಮುದುಕ ಎರಡು ದಿನ ಹೇಗೋ ಕಳೆದಿದ್ದ.
ಮುಂದೆ ಹಸಿವೆ ತಾಳದೆ ಅಲ್ಲೇ ಬಿದ್ದಿದ್ದ ಮೇಣದ ಬತ್ತಿಯ ಚೂರು ತಿಂದಿದ್ದ !

ಕೊನೆಗೆ ಅನ್ನ-ನೀರು,
ನೀರು-ಅನ್ನವೆಂದು ಕೈಯಲ್ಲಿ ಮುತ್ತುರತ್ನ ಹಿಡಿದು ಪ್ರಾಣ ಬಿಟ್ಟಿದ್ದ

ಹತ್ತಾರು ವರುಷಗಳ ನಂತರ ಮಕ್ಕಳೆಲ್ಲ ಈ ಮನೆಯನ್ನು ಮಾರಿ ಪಟ್ಟಣ ಸೇರಿದರು.
ಕೊಂಡವನು ಹೊಸಮನೆಯ ಕಟ್ಟಲೆಂದು ಈ ಹಳೆಮನೆಯ ಕೆಡವಿದ.

ಅಡಿಪಾಯ ತೆಗೆಯಿಸುವಾಗ ನೆಲಮನೆಯು ಕಾಣಿಸಿತು.
ಬಾಗಿಲು ಮುರಿದು ಒಳಗೆ ಹೋದ. ಕುರ್ಚಿಯ ಮೇಲೆ ಅಸೀನನಾಗಿದ್ದ ಮುದುಕನ ಅಸ್ಥಿಪಂಜರ ಕಂಡಿತು
ಅದರ ಕೈಯಲ್ಲಿ ಮುತ್ತುರತ್ನಗಳಿದ್ದವು
ಹೊಸ ಮಾಲೀಕ ಕ್ಷಣಕಾಲ ತನ್ನ ಕಣ್ಣನ್ನು ತಾನೇ ನಂಬಲು ಆಗದಂತೆ ನಿಬ್ಬೆರಗಾದ.
ನಿರಾಯಾಸವಾಗಿ ದೊರಕಿದ್ದ ಅಪಾರ ಸಿರಿಯ ಕಂಡು ಅವನಿಗೆ ಅಂತ್ಯತ ಸಂತೋಷವಾಯಿತು.

ತಕ್ಷಣವೇ ಜಡಸಿರಿ ನಕ್ಕು ನುಡಿಯಿತು- ''ಮುದುಕನ ಸರದಿ ಮುಗಿಯಿತು, ಇನ್ನು ನಿನ್ನದು

*-ಶ್ರೀ.ಸಿದ್ದೇಶ್ವರ ಶ್ರೀಗಳು*

ಪುಳಿಯೋಗರೆಯ ಪ್ರಯಾಣ

ಹತ್ತನೇ ಶತಮಾನದಲ್ಲಿ ಶಿವಕೋಟ್ಯಾಚಾರ್ಯ ವಿರಚಿತ ಕನ್ನಡದ ಗದ್ಯ ಕೃತಿ...ಬೃಹತ್ ಆರಾಧನೆ.. "ವಡ್ಡಾರಾಧನೆ". ಆ ಕೃತಿಯಲ್ಲಿ ಬರುವ 'ಇಡ್ಡಲಿಗೆ' ಎನ್ನುವ ಖಾದ್ಯ ಈಗ ವಿಶ್ವದಾದ್ಯಂತ ಆರೋಗ್ಯಕರ ಉಪಹಾರ ಎನಿಸಿಕೊಳ್ಳುವ ಬಿರುದು ಪಡೆದು ಬೀಗುತ್ತಿರುವ 'ಇಡ್ಲಿ'.
ಇಂತಹುದೇ ಇತಿಹಾಸದ ಮಹತ್ವ ಪಡೆದಿರುವ ಇನ್ನೊಂದು ಖಾದ್ಯ, ಕರ್ನಾಟಕದಲ್ಲಿ, ಮೇಲುಕೋಟೆಯಲ್ಲಿ ಜನ್ಮತಾಳಿದ "ಪುಳಿಯೋಗರೆ". ಪುಳಿಯೋಗರೆಯ ಇತಿಹಾಸದ ಜೊತೆಗೇ ಧಾರ್ಮಿಕತೆಯೂ ಸಮ್ಮಿಳಿತವಾಗಿ ಇದೊಂದು ವಿಷೇಶ ಪ್ರಸಾದದ ರೂಪದಲ್ಲಿ ಹಲವಾರು ದೇವಸ್ಥಾನಗಳಲ್ಲಿ ಸ್ಥಾನ ಪಡೆದಿದೆ.

ಇಂದು ಶ್ರೀ ರಾಮಾನುಜಾಚಾರ್ಯರ 1001 ನೇ ಜನ್ಮೋತ್ಸವದಂದು ಪುಳಿಯೋಗರೆಯ ಮುಖಾಂತರವಾದರೂ ಅವರನ್ನು ಸ್ಮರಿಸಬೇಕು, ಏಕೆಂದರೆ ಪುಳಿಯೋಗರೆಯ ಜನ್ಮಸ್ಥಳ ಮೇಲುಕೋಟೆ, ಈ ಪ್ರಸಾದದ ಕತೃ
  ಶ್ರೀ ರಾಮಾನುಜಾಚಾರ್ಯರು..!

ದೂರ ದೂರದ ಹಳ್ಳಿಗಳಿಂದ ಬರುತ್ತಿದ್ದ ಎಲ್ಲಾ ಜಾತಿ, ಕುಲಗಳ ಭಕ್ತಾದಿಗಳು ಮೇಲುಕೋಟೆಯಲ್ಲಿ ಹಲವಾರು ದಿನಗಳವರೆಗೆ ತಂಗುತ್ತಿದ್ದರು. ಇವರ ಹಸಿವು ತಣಿಸಲು ಆರೋಗ್ಯಕರವಾದ ಮತ್ತು ರುಚಿಕರವಾದ ಖಾದ್ಯವೊಂದನ್ನು ಬೆಳಗಿನ ಮತ್ತು ಸಂಜೆಯ ಪೂಜೆಗೆ ನೈವೇದ್ಯವಾಗಿ ಅರ್ಪಿಸಿದ ಪ್ರಸಾದವನ್ನು ಭಕ್ತರಿಗೆ ಹಂಚಿದರೆ ದೇವರೂ ಮತ್ತು ಹೊಟ್ಟೆ ತುಂಬಿದ ಭಕ್ತರೂ ಸಂತೃಪ್ತರಾಗಿರುತ್ತಾರೆ ಎನ್ನುವ ಚಿಂತನೆ ರಾಮಾನುಜಾಚಾರ್ಯರದು.
ಸಮಸ್ಯೆಯೆಂದರೆ ಬೇಯಿಸಿದ ಅನ್ನ ಹಳಸದಂತೆ ಕಾಪಾಡಿಕೊಂಡಿರಬೇಕು. ಅದಕ್ಕೆ ರಾಮಾನುಜಾಚಾರ್ಯರೇ ಹುಡುಕಿದ ಪರಿಹಾರ,
ಹುಣಸೇಹಣ್ಣಿನ ರಸ ಮತ್ತು ಕಬ್ಬಿನ ಹಾಲು ಬೆರಸಿ ಸಣ್ಣ ಕುದಿ ತೆಗೆದು ಅದನ್ನು ಆರಿದ ಅನ್ನಕ್ಕೆ ಬೆರೆಸಿದರೆ ದಿನವಿಡೀ ಸೇವಿಸಲು ಯೋಗ್ಯವಾದ ಖಾದ್ಯ. ಇದನ್ನೇ ದೇವರ ಪ್ರಸಾದದ ರೂಪದಲ್ಲಿ ಕೊಡುತ್ತಿದ್ದರಿಂದ ಭಕ್ತರು ಅನ್ನಕ್ಕೆ ಅಸಡ್ಡೆ ತೋರದೆ, ಚೆಲ್ಲದೆ, ಬಿಸಾಡದೆ ಸ್ವೀಕರಿಸುತ್ತಿದ್ದರು.

ಭಕ್ತರ ಮೇಲಿನ ಅತೀವ ಕಳಕಳಿಯಿಂದ ಪ್ರಸಾದದ ಪ್ರತಿರೂಪವನ್ನೇ ಮಾರ್ಪಡಿಸಿದ, ಪುಳಿಯೋಗರೆಯನ್ನು ಕಲಸಿ ಅನ್ನಕ್ಕೆ ಹೊಸ ರೂಪ,ರುಚಿಯನ್ನು ಕೊಟ್ಟಹಾಗೆ, ಹಲವು ಸಿದ್ದಾಂತಗಳ ಸಾರಗಳನ್ನು ಬೆರೆಸಿ ಹಸನಾಗಿ, ಸಾಮಾನ್ಯರಿಗೆ ಅರ್ಥವಾಗುವಂತೆ "ವಿಶಿಷ್ಟಾದ್ವೈತ" ದ ಸೃಷ್ಟಿಕರ್ತನಿಗೆ ನಮೋ ನಮಃ.

💐💐💐💐💐

Received a hilarious one for our generation.!!😍😜

*GRANDPARENTS' ANSWERING MACHINE* !

📠
Good Morning !

At present, we are not at home, but please leave your message after you hear the beep.🔅

Beeeeeppp...

● If you are one of our children, dial 1 and then select the option from 1 to 5 in order of "birth arrival" so we know who it is.

● If you need us to stay with the children, press 2.

● If you want to borrow the car, press 3.

● If you want us to wash your clothes and do iron, press 4.

● If you want the grandchildren to sleep here tonight, press 5.

● If you want us to pick up the kids at school, press 6.

● If you want us to prepare a meal for Sunday or to have it delivered to your home, press 7.

● If you want to come to eat here, press 8.

● If you need money, press 9.

● If you are going to invite us to dinner or take us to the theatre, start talking...we are listening !

*I love it every time I read this* !
😊😊😊

*ಅಮೂಲ್ಯ ಮಾಹಿತಿ.*

1].  ರಾಮನಾಮಕ್ಕೆ ಸಮನಾದ ನಾಮ ಇನ್ನೊಂದಿಲ್ಲ.
2].  ಗೌರೀಶಂಕರ ಶಿಖರಕ್ಕೆ ಸಮನಾದ ಶಿಖರ ಇನ್ನೊಂದಿಲ್ಲ.
3].  ಸುಳ್ಳಿಗೆ ಸಮನಾದ ಪಾಪ ಇನ್ನೊಂದಿಲ್ಲ.
4].  ಭಾಗೀರಥಿಗೆ ಸಮನಾದ ತೀರ್ಥ ಇನ್ನೊಂದಿಲ್ಲ.
5]. ತಾಯಿ ತಂದೆಯರಿಗೆ ಸಮನಾದ ದೇವರಿಲ್ಲ.
6].  ಭಾಗವತಕ್ಕೆ ಸಮನಾದ ಪುರಾಣರತ್ನ ಇನ್ನೊಂದಿಲ್ಲ.
7].  ಪತ್ನಿಗೆ ಸಮಳಾದ ಸ್ನೇಹಿತೆ ಇನ್ನೊಬ್ಬಳ್ಳಿಲ್ಲ.
8].  ಭಾರತಕ್ಕೆ ಸಮನಾದ ದೇಶ ಇನ್ನೊಂದಿಲ್ಲ.
9].  ಗೋವಿಗೆ ಸಮಳಾದ ಮಾತೆ ಇನ್ನೊಬ್ಬಳಿಲ್ಲ .
10].  ಗೃಹಸ್ಥಾಶ್ರಮಕ್ಕೆ ಸಮನಾದ ಆಶ್ರಮ ಇನ್ನೊಂದಿಲ್ಲ.
11].  ಗೀತೆಗೆ ಸಮನಾದ ಗ್ರಂಥ ಇನ್ನೊಂದಿಲ್ಲ.
12].  ಗಾಯತ್ರಿಮಂತ್ರಕ್ಕೆ ಸಮನಾದ ಮಂತ್ರ ಇನ್ನೊಂದಿಲ್ಲ.
13].  ಧ್ಯಾನಕ್ಕೆ ಸಮನಾದ ಆನಂದ ಇನ್ನೊಂದಿಲ್ಲ.
14].  ಹರಿ ವಾಯು ಗುರುಗಳ ಆಶೀರ್ವಾದಕ್ಕೆ ಸಮನಾದ ಭಾಗ್ಯ ಇನ್ನೊಂದಿಲ್ಲ.


*ಲೋಕ ಸಮಸ್ತ ಸನ್ಮಂಗಳಾನಿ ಭವಂತು..*

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...