Monday 2 December 2019

ಧನುರ್ ಮಾಸ ವ್ರತ ಪ್ರಾರಂಭವಾದುದು ಹೇಗೆ?

ಒಮ್ಮೆ ಬ್ರಹ್ಮ ದೇವನು ಹಂಸ ಪಕ್ಷಿಯ ಅವತಾರ ಮಾಡಿಕೊಂಡು ಲೋಕ ಸಂಚಾರ ಮಾಡುತ್ತಿದ್ದನು.

 ಆ ಸಮಯದಲ್ಲಿ ಸೂರ್ಯ ದೇವನು ಹೆಚ್ಚಿನ ಬೆಳಕು ಮತ್ತು ಶಾಖವನ್ನು ಬ್ರಹ್ಮನ (ಹಂಸ) ಮೇಲೆ ಪ್ರಯೋಗಿಸಿದನು.

ಇದರಿಂದ ಕೋಪಗೊಂಡ ಬ್ರಹ್ಮ ದೇವನು ನಿನ್ನ ತೇಜೋಬಲ ಕ್ಷೀಣಿಸಲಿ ಎಂದು ಸೂರ್ಯನಿಗೆ ಶಾಪ ಕೊಟ್ಟ.

ತಕ್ಷಣ ಸೂರ್ಯನು ಕಾಂತಿಹೀನನಾಗಿ ತನ್ನ ಪ್ರಕಾಶಮಾನವನ್ನು ಕಳೆದುಕೊಂಡನು. ಇದರಿಂದ ಭೂಲೋಕದಲ್ಲಿ ಅಲ್ಲೋಲಕಲ್ಲೋಲವಾಯಿತು.

ಸೂರ್ಯನಿಲ್ಲದೆ ಜಪ -ತಪ, ಹೋಮ-ಹವನಗಳು ನಿಂತುಹೋಯಿತು. ದೇವತೆಗಳ ಮತ್ತು ಋಷಿಗಳ ನಿತ್ಯ ಕಾರ್ಯಗಳಿಗೆ ತೊಂದರೆ ಆಯಿತು.

ಹಲವು ವರ್ಷಗಳ ಕಾಲ ದೇವತೆಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು.

ಬ್ರಹ್ಮ ಪ್ರತ್ಯಕ್ಷನಾದ, ಸೂರ್ಯನಿಗೆ ಕೊಟ್ಟ ಶಾಪ ವಿಮೋಚನೆ ಮಾಡು ಎಂದು ಕೇಳಿದ.

ಸೂರ್ಯನು ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನನ್ನು ಪೂಜೆ ಮಾಡಿದರೆ ನನ್ನ ಶಾಪ ವಿಮೋಚನೆ ಆಗುವುದು ಎಂದು ನುಡಿದನು.

ಅದರಂತೆ ಸೂರ್ಯನು 16 ವರ್ಷಗಳ ಕಾಲ ಮಹಾವಿಷ್ಣುವಿನ ಪೂಜೆ ಮಾಡಿ ತನ್ನ ತೇಜಸ್ಸು ಮತ್ತು ಶಕ್ತಿಯನ್ನು ಪಡೆದುಕೊಂಡನು. ಸೂರ್ಯ ದೇವನಿಂದಲೇ ಆರಂಭವಾದ ಈ ಪೂಜೆ ನಂತರ ಲೋಕದಲ್ಲೆಲ್ಲ ಪ್ರಚಾರವಾಯಿತು.

ಧನುರ್ಮಾಸವನ್ನು ಶೂನ್ಯ ಮಾಸ ಎಂದೂ ಕರೆಯುತ್ತಾರೆ. ಈ ಮಾಸದಲ್ಲಿ ಶುಭ ಕಾರ್ಯಗಳಾದ ಮದುವೆ, ಗೃಹ ಪ್ರವೇಶ, ಉಪನಯನ ಮುಂತಾದ ಕಾರ್ಯಗಳನ್ನು ಮಾಡುವುದಿಲ್ಲ.

ಧನುರ್ಮಾಸ ವ್ರತವನ್ನು ಅಗಸ್ತ್ಯ ಮಹರ್ಷಿ, ವಿಶ್ವಾಮಿತ್ರ, ಗೌತಮ ಮಹರ್ಷಿ, ಭೃಗು ಮಹರ್ಷಿ ಇನ್ನೂ ಅನೇಕ ದೇವಾನು ದೇವತೆಗಳು ಮಾಡಿರುವವರು.ಅಲ್ಲದೆ ಪಾರ್ವತಿಯೇ ಈ ವ್ರತವನ್ನು ಮಾಡಿ ಶಿವನನ್ನು ಮತ್ತೆ ಪತಿಯಾಗಿ ಪಡೆದಳು.

ಈ ವ್ರತವನ್ನು ಯಾರು ಮಾಡಿದರೆ ಹೆಚ್ಚಿನ ಫಲ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ

* ಧನುರ್ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಜಾತಕದಲ್ಲಿ ರವಿ ಗ್ರಹವು ಧನುಸ್ಸು ರಾಶಿಯಲ್ಲಿ ಇರುತ್ತಾನೆ. ಇವರು ಈ ವ್ರತವನ್ನು ಮಾಡಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ.

* ಜಾತಕದಲ್ಲಿ ರವಿ ಮ್ತು ಗುರು ಗ್ರಹವು ಒಂದೇ ರಾಶಿಯಲ್ಲಿದ್ದರೆ ಅಂಥವರು ಈ ಧನುರ್ಮಾಸದ ಪೂಜೆಯನ್ನು ಮಾಡಿದರೆ ಬುದ್ಧಿಶಕ್ತಿ ಹೆಚ್ಚುತ್ತದೆ.

* ಗರ್ಭಿಣಿಯರು ಈ ವ್ರತವನ್ನು ಮಾಡಿದರೆ ಒಳ್ಳೆಯ ಸಂತಾನ ಪಡೆಯಬಹುದು.

* ಸಂತಾನ ಇಲ್ಲದವರು ಸಂತಾನ ಭಾಗ್ಯ ಪಡೆಯಬಹುದು.

* ವಿವಾಹ ಆಗದೆ ಇರುವ ಕನ್ಯೆಯರಿಗೆ ಶೀಘ್ರ ವಿವಾಹ ಆಗುವುದು.

* ವಿದ್ಯಾರ್ಥಿಗಳು ಒಳ್ಳೆಯ ವಿದ್ಯೆ ಪಡೆಯಬಹುದು

* ಉತ್ತಮ ಆರೋಗ್ಯವನ್ನು ಪಡೆಯಲು ವೃದ್ಧರು ಕೂಡ ಈ ವ್ರತವನ್ನು ಮಾಡಬಹುದು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...