Tuesday 27 August 2019

*ಚಿನ್ನದಂಥ ಸಾಲುಗಳು:*

ಕರೆಯದವರ ಮನೆಗೆ
ಊಟಕ್ಕೆ ಹೋಗಬೇಡ
ಕರುಣೆ ಇಲ್ಲದವರ ಹತ್ತಿರ
ಕಷ್ಟವನು ಹೇಳಬೇಡ

ಬಂದ ಭಾಗ್ಯವನು
ಕಾಲಲ್ಲಿ ಒದೆಯಬೇಡ
ಹಸಿವಿರದವಗೆ ಒತ್ತಾಯದ
ಊಟ ಬಡಿಸಬೇಡ

ಹೃದಯಹೀನರ ಹತ್ತಿರ
ಪ್ರೀತಿ ಭಿಕ್ಷೆ ಬೇಡಬೇಡ
ಹೆತ್ತವರೆದುರು ಎದೆಗೊಟ್ಟು
ಮಾತನಾಡಬೇಡ

ನದಿಮೂಲ ಹುಡುಕುವ
ತಂಟೆಗೆ ಹೋಗಬೇಡ
ದೇವರಿಲ್ಲವೆಂದು ಹುಚ್ಚು
ವಾದ ಮಾಡಬೇಡ

ನೊಂದವರ ನಿಟ್ಟುಸಿರಿಗೆ
ಕಾರಣನಾಗಬೇಡ
ಒಡಹುಟ್ಟಿದವರ ಪ್ರೀತಿಗೆ
ಪುರಾವೆ ಕೇಳಬೇಡ

ಕಂಡವರ ಎದುರಿಗೆ
ಹೆಂಡತಿಯ ನಿಂದಿಸಬೇಡ
ಗುರುಹಿರಿಯರ ಮಾತಿಗೆ
ಎದುರುತ್ತರ ಕೊಡಬೇಡ

ಅಸಹಾಯಕರ ಸ್ಥಿತಿಯ
ಕಂಡು ನಗಬೇಡ
ಸ್ನೇಹಿತನನ್ನು ನಂಬಿಸಿ
ಬೆನ್ನಿಗೆ ಚೂರಿ ಇರಿಯಬೇಡ

ಬಾಯಾರಿದಾಗ ನೀರುಕೊಟ್ಟ
ಮನೆಯನು ಮರೆಯಬೇಡ
ಯಾರನ್ನು ಅತಿಯಾಗಿ ನಂಬಿ
ಮೋಸಹೋಗಬೇಡ

ಕ್ಷೇಮವಾಗಿ ಮನೆ ತಲುಪಿಸಿದ
ದಾರಿಯನು ಮರೆಯಬೇಡ..
ಒಂಟಿ ನಾನೆನ್ನುವಾಗ, ಜೊತೆ ಬಂದ ಮನವನು ಮರೆಯಬೇಡ



🙏🙏🙏🙏🙏🙏

ಖಂಡಿತಾ ಎಲ್ಲರಿಗೂ ಶೇರ್ ಮಾಡಿ...

🙌🙌🙌🙌🙌🙌

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...